ಚರ್ಚ್‌ನಿಂದ 4.98 ಲಕ್ಷ ರೂ. ಕಳವು

Update: 2021-04-06 16:59 GMT

ಮಂಗಳೂರು, ಎ.6: ನಗರದ ಬೆಂದೂರ್ ಚರ್ಚ್‌ನಿಂದ ಸೋಮವಾರ 4.98 ಲಕ್ಷ ರೂ. ಕಳವಾಗಿರುವ ಬಗ್ಗೆ ಕದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬೆಂದೂರ್‌ನ ಸೈಂಟ್ ಸೆಬಾಸ್ಟಿಯನ್ ಚರ್ಚ್‌ನಲ್ಲಿ ಬೆಳಗ್ಗೆ 6:30ಕ್ಕೆ ಪ್ರಾರ್ಥನೆ ನಡೆದ ಬಳಿಕ ಅಲ್ಲಿನ ಕಚೇರಿ ಬಾಗಿಲಿಗೆ ಬೀಗ ಹಾಕಲು ಮರೆತು ಹೋಗಿತ್ತು. ಈ ಸಂದರ್ಭ ಕಳ್ಳ ಕಚೇರಿಗೆ ಆಗಮಿಸಿ ಡ್ರಾವರ್‌ನಲ್ಲಿದ್ದ ಹಣವನ್ನು ಎಗರಿಸಿದ್ದಾನೆ ಎಂದು ದೂರಲಾಗಿದೆ.

ಕದ್ರಿ ಪೊಲೀಸರು, ಶ್ವಾನದಳ ಹಾಗೂ ಬೆರಳಚ್ಚು ತಜ್ಞರು ತನಿಖೆ ನಡೆಸಿದ್ದಾರೆ. ಆರೋಪಿಯ ಪತ್ತೆಗೆ ಕದ್ರಿ ಪೊಲೀಸರು ಕಾರ್ಯಾಚರಣೆ ಮುಂದುವರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News