ಕಾರ್ಕಳ : ಹುತಾತ್ಮ ಯೋಧರಿಗೆ ನಮನ

Update: 2021-04-06 17:10 GMT

ಕಾರ್ಕಳ : ಛತ್ತೀಸ್‌ಗಢದಲ್ಲಿ ನಕ್ಸಲ್ ದಾಳಿಗೆ ಹುತಾತ್ಮರಾದ ಯೋಧರಿಗೆ ಆನೆಕೆರೆ ಅಮರ್ ಜವಾನ್ ಸ್ಮಾರಕದಲ್ಲಿ ಕಾರ್ಕಳ ನಗರ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಘಟಕದ ವತಿಯಿಂದ ಸೋಮವಾರ ಶ್ರದ್ಧಾಂಜಲಿ ಅರ್ಪಿಸಲಾಯಿತು.

ತಾಲೂಕು ಸಹಸಂಚಾಲಕ ಕಾಬೆಟ್ಟು ಮನೀಶ್ ಕುಲಾಲ್ ಮಾತನಾಡಿ, ಕೇಂದ್ರ ಸರಕಾರವು ಸೈನಿಕರ ಬಲಿದಾನಕ್ಕೆ ನ್ಯಾಯ ಒದಗಿಸಬೇಕು. ಕಮ್ಯುನಿಸ್ಟ್ ಮನಸ್ಥಿತಿ ಈ ಘಟನೆಗೆ ಕಾರಣವಾಗಿದೆ ಎಂದರು. ತಾಲೂಕು ಸಂಚಾಲಕ ರಾಜ್ಯಕಾರ್ಯಕಾರಣಿ ಸದಸ್ಯ ಯುಕೇಶ್ ಉಜಿರೆ, ತಾಲೂಕು ವಿದ್ಯಾರ್ಥಿನಿ ಪ್ರಮುಖ್ ರಾಜ್ಯಕಾರ್ಯಕಾರಣಿ ಸದಸ್ಯೆ ಅಪರ್ಣ ಕಾರ್ಕಳ, ಎಬಿವಿಪಿ ಕಾರ್ಯಕರ್ತರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News