ಎನ್‌ಎಂ ಮಂಗಳೂರಿಗೆ ಯುವ ಕಾಂಗ್ರೆಸ್ ಟ್ರೋಫಿ

Update: 2021-04-07 16:39 GMT

ಮಂಗಳೂರು, ಎ.7: ಯುವ ಕಾಂಗ್ರೆಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಮೆರಿಲ್ ರೇಗೋ ನೇತೃತ್ವದಲ್ಲಿ ಚಾರಿಟಿ ಸಹಾಯಾರ್ಥ ಆಯೋಜಿಸಿದ ಯುವ ಕಾಂಗ್ರೆಸ್ ಟ್ರೋಫಿ ಕ್ರಿಕೆಟ್ ಪಂದ್ಯಾವಳಿಯ ಸಮಾರೋಪ ಹಾಗೂ ವಿಜೇತರಿಗೆ ಪ್ರಶಸ್ತಿ ವಿತರಣಾ ಕಾರ್ಯಕ್ರಮ ಮಂಗಳವಾರ ನಗರದ ನೆಹರೂ ಮೈದಾನದಲ್ಲಿ ನಡೆಯಿತು.

ಈ ವೇಳೆ ಪಶ್ಚಿಮ್ ಟ್ರಸ್ಟ್ ಸೋಮೇಶ್ವರ ಸಂಸ್ಥೆಗೆ ಧನ ಸಹಾಯವನ್ನು ಹಸ್ತಾಂತರಿಸಲಾಯಿತು. ಪ್ರಥಮ ಸ್ಥಾನ ಪಡೆದುಕೊಂಡ ಎನ್.ಎಂ ಮಂಗಳೂರು ತಂಡಕ್ಕೆ 50 ಸಾವಿರ ರೂ.ನಗದು ಹಾಗೂ ದ್ವಿತೀಯ ಸ್ಥಾನ ಪಡೆದ ಯಂಗ್ ಫ್ರೆಂಡ್ಸ್ ಗಾಂಧಿನಗರ ತಂಡಕ್ಕೆ 25 ಸಾವಿರ ರೂ. ನಗದು ನೀಡಲಾಯಿತು.

ಕಾರ್ಯಕ್ರಮದಲ್ಲಿ ಮನಪಾ ವಿರೋಧ ಪಕ್ಷದ ನಾಯಕ ಎ.ಸಿ. ವಿನಯರಾಜ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರಕಾಶ್ ಸಾಲಿಯಾನ್, ಕಾರ್ಪೊರೇಟರ್‌ ಗಳಾದ ಲತೀಫ್ ಕಂದಕ್, ಅನಿಲ್ ಕುಮಾರ್, ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷರಾದ ಸುನೀಲ್ ಕುಮಾರ್, ರಾಕೇಶ್ ದೇವಾಡಿಗ, ಪಕ್ಷದ ಮುಖಂಡರಾದ ನಝೀರ್ ಬಜಾಲ್, ಪ್ರಹ್ಲಾದ್ ಬಿ, ನವಾಝ್ ಸುಳ್ಯ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News