​ಭೂ ವಿವಾದ : ಎರಡು ಮನೆಯವರ ನಡುವೆ ಸಂಘರ್ಷ; ತಂಡದಿಂದ ಹಲ್ಲೆ ಆರೋಪ

Update: 2021-04-09 08:34 GMT

ಉಪ್ಪಿನಂಗಡಿ : ಭೂ ವಿವಾದಕ್ಕೆ ಸಂಬಂಧಿಸಿ ಎರಡು ಮನೆಯವರ ನಡುವೆ ಸಂಘರ್ಷದಲ್ಲಿ ಹೊರಗಿನಿಂದ ಬಂದ ತಂಡವೊಂದು ಹಲ್ಲೆ ನಡೆಸಿದೆ ಎನ್ನಲಾದ ಘಟನೆ ಉಪ್ಪಿನಂಗಡಿ ಪೊಲೀಸ್ ಠಾಣೆ ವ್ಯಾಪ್ತಿಯ ಬಾರ್ಯ ಗ್ರಾಮದ ಪುಳಿಂಪ್ಪಾಡಿ ಎಂಬಲ್ಲಿ ಗುರುವಾರ ನಡೆದಿದೆ.

ಕೇಶವ ಗೌಡ ಮತ್ತು ರಝಾಕ್ ಎಂಬವರು ನೆರೆಹೊರೆಯವರಾಗಿದ್ದು, ಅವರೊಳಗೆ ಭೂ ವಿವಾದವಿತ್ತೆನ್ನಲಾಗಿದೆ. ಈ ಬಗ್ಗೆ ಗುರುವಾರ ಮಾತಿನ ಚಕಮಕಿ ನಡೆದಾಗ ರಝಾಕ್ ಪರ ಹೊರಗಿನಿಂದ ಬಂದ ತಂಡ ಕೇಶವ ಗೌಡರ ಮನೆಗೆ ನುಗ್ಗಿ  ಹಲ್ಲೆ ನಡೆಸಿದ್ದಾರೆ ಎಂದು ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿರುವ ಗಾಯಾಳುಗಳು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

ಇದೇ ಪ್ರಕರಣಕ್ಕೆ ಸಂಬಂಧಿಸಿ ರಝಾಕ್ ಕಡೆಯಿಂದಲೂ ಇಬ್ಬರು ಆಸ್ಪತ್ರೆಗೆ ದಾಖಲಾಗಿದ್ದು, ತಮ್ಮ ಮೇಲೆ ಕೇಶವ ಗೌಡರ ಕಡೆಯವರಿಂದ ಹಲ್ಲೆ ನಡೆದಿದೆ ಎಂದು ದೂರಿದ್ದಾರೆ.

ಉಪ್ಪಿನಂಗಡಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದು, ತನಿಖೆ ನಡೆಸುತ್ತಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News