ತಣ್ಣೀರುಬಾವಿ: ಮೀನುಗಾರ ನಾಪತ್ತೆ

Update: 2021-04-08 17:48 GMT

ಮಂಗಳೂರು, ಎ.8: ಪಣಂಬೂರು ಸಮೀಪದ ತಣ್ಣೀರುಬಾವಿಯಿಂದ ನಾಡದೋಣಿ ಮೀನುಗಾರಿಕೆಗೆ ತೆರಳಿದ್ದ ಮೀನುಗಾರರೊಬ್ಬರು ನಾಪತ್ತೆಯಾದ ಘಟನೆ ಗುರುವಾರ ನಡೆದಿದೆ.

ತಣ್ಣೀರುಬಾವಿಯ ದಾವೂದ್ ಸಿದ್ದೀಕ್ (39) ಕಾಣೆಯಾದ ಮೀನುಗಾರ ಎಂದು ತಿಳಿದುಬಂದಿದೆ.

ಗುರುವಾರ ಪೂರ್ವಾಹ್ನ ಸುಮಾರು 11:30ರ ವೇಳೆಗೆ ಪಣಂಬೂರು ಕಡಲ ತೀರದಿಂದ ಅರಬ್ಬೀ ಸಮುದ್ರದಲ್ಲಿ ಸುಮಾರು 14 ನಾಟಿಕಲ್ ಮೈಲ್ ದೂರದಲ್ಲಿ ಈ ಘಟನೆ ನಡೆದಿದೆ. ನಾಡದೋಣಿಯಲ್ಲಿ ಸುಮಾರು 6 ಮಂದಿ ಇದ್ದು, ದಾವೂದ್ ಸಿದ್ದೀಕ್ ಮೀನು ಹಿಡಿಯುವಾಗ ಕಾಣೆಯಾಗಿದ್ದಾರೆ. ಕಳೆದ 15 ವರ್ಷದಿಂದ ಇವರು ಮೀನುಗಾರಿಕೆಯಲ್ಲಿ ತೊಡಗಿಸಿಕೊಂಡಿದ್ದರು. ತಣ್ಣೀರುಬಾವಿಯ ಮುಳುಗು ರಕ್ಷಣಾ ತಂಡದ ಸದಸ್ಯರೂ ಆಗಿದ್ದರು. ಈ ಬಗ್ಗೆ ಪಣಂಬೂರು ಠಾಣೆಯಲ್ಲಿ ದೂರು ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News