ಯತ್ನಾಳ್ ಗೆ ನೋಟಿಸ್ ನೀಡಲಾಗಿದ್ದು, ಪಕ್ಷದಿಂದ ತೆಗೆಯುತ್ತೇವೆ: ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್

Update: 2021-04-09 10:57 GMT
ಅರುಣ್ ಸಿಂಗ್-ಯತ್ನಾಳ್

ಬೆಳಗಾವಿ: ಬಿಜೆಪಿ ಶಾಸಕ ಯತ್ನಾಳ್ ಅವರಿಗೆ ನೋಟಿಸ್ ಕೊಟ್ಟಿದ್ದೇವೆ, ಆದಷ್ಟು ಬೇಗ ಅವರನ್ನು ಪಕ್ಷದಿಂದ ತೆಗೆಯುತ್ತೇವೆ ಎಂದು ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ತಿಳಿಸಿದ್ದಾರೆ.

ಶಾಸಕ ಬಸನಗೌಡ ಯತ್ನಾಳ್ ಅವರ ಬಗ್ಗೆ ನನಗೆ ಪ್ರಶ್ನೆ ಮಾಡಬೇಡಿ. ನಾನಂತು ಅವರ ಹೆಸರು ತೆಗೆದುಕೊಳ್ಳುವುದಿಲ್ಲ. ನಾವು ಈಗಾಗಲೇ ಅನೇಕ ಬಾರಿ ಮಾತನಾಡಿದ್ದೇನೆ. ಪದೇ ಪದೇ ಅವರ ಬಗ್ಗೆ ಮಾತನಾಡಿ ಜನಪ್ರಿಯ ಮಾಡಬೇಕಾ..? ನನಗೆ ಅವರ ಬಗ್ಗೆ ಮಾತನಾಡಿ ಜನಪ್ರಿಯ ಮಾಡುವ ಉದ್ದೇಶವಿಲ್ಲ ಎಂದು ಅವರು ಹೇಳಿದರು.

ಬೆಳಗಾವಿಯಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಅರುಣ್ ಸಿಂಗ್, ಯತ್ನಾಳ್ ಅವರಿಗೆ ಮಾಧ್ಯಮದ ಮೇಲೆ ನಂಬಿಕೆ ಇದೆ. ಆದರೆ, ಬಿಜೆಪಿ ಪಕ್ಷಕ್ಕೆ ಯತ್ನಾಳ ಮೇಲೆ ಶೂನ್ಯದಷ್ಟು ನಂಬಿಕೆ ಇಲ್ಲ. ಪದೇ ಪದೇ ಯತ್ನಾಳ್ ಅವರ ಬಗ್ಗೆ ಪ್ರಶ್ನೆ ಮಾಡಬೇಡಿ. ಯತ್ನಾಳ್ ಅವರಿಗೆ ನೋಟಿಸ್ ಕೊಟ್ಟಿದ್ದೇವೆ, ಆದಷ್ಟು ಬೇಗ ಪಕ್ಷದಿಂದ ತೆಗೆಯುವವರು ಇದ್ದೇವೆ ಎಂದರು. ಅದೇ ರೀತಿ ಈಗಾಗಲೇ ಅವರನ್ನ ಪಕ್ಷದಿಂದ ತೆಗೆದು ಹಾಕಿದಂತೆಯೇ ಇದೆ ಎಂದು ಅರುಣ್ ಸಿಂಗ್ ಸ್ಪಷ್ಟಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News