ಬೆಳ್ಳಾರೆಯಲ್ಲಿ ಮೊಬೈಲ್ ಸರ್ವಿಸಸ್ ಅಂಗಡಿಯಲ್ಲಿ ಕಳವು

Update: 2021-04-09 13:42 GMT

ಸುಳ್ಯ: ಬೆಳ್ಳಾರೆ ಮೇಲಿನ ಪೇಟೆ ಸಿಂಡಿಕೇಟ್ ಬ್ಯಾಂಕ್ ಬಳಿಯ ಶ್ರೀ ಮೊಬೈಲ್ ಸರ್ವೀಸಸ್ ಅಂಗಡಿಗೆ ಗುರುವಾರ ರಾತ್ರಿ ಕಳ್ಳರು ನುಗ್ಗಿ ಮೊಬೈಲ್ ಮತ್ತು ನಗದುಗಳನ್ನು ದೋಚಿ ಪರಾರಿಯಾದ ಘಟನೆ ನಡೆದಿದೆ.

ಬೆಳ್ಳಾರೆ ಮೇಲಿನ ಪೇಟೆಯಲ್ಲಿ ಈ ಅಂಗಡಿಯ ಬೀಗ ಒಡೆದು ನಗದು ಹಾಗೂ ಸರ್ವೀಸ್‍ಗೆ ಇಡಲಾದ ಹಲವು ಮೊಬೈಲ್‍ಗಳನ್ನು ದೋಚಿದ್ದಾರೆ. ಈ ಕುರಿತು ಅಂಗಡಿಯ ಮಾಲಕ ಗುಣ ಎಂಬವರು ಬೆಳ್ಳಾರೆ ಪೊಲೀಸ್ ಠಾಣೆಗೆ ಮಾಹಿತಿ ತಿಳಿಸಿದ್ದು, ಬೆಳ್ಳಾರೆ ಪೊಲೀಸ್ ಠಾಣೆಯ ಠಾಣಾಧಿಕಾರಿ ಆಂಜನೇಯ ರೆಡ್ಡಿ ಹಾಗೂ ಪೊಲೀಸರು ಸ್ಥಳಕ್ಕೆ ಆಗಮಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News