ಮಲ್ಪೆ: ಫಾಸ್ಟ್‌ಪುಡ್ ಅಂಗಡಿ ನಡೆಸುತ್ತಿದ್ದ ವ್ಯಕ್ತಿ ನೇಣು ಬಿಗಿದು ಆತ್ಮಹತ್ಯೆ

Update: 2021-04-09 17:14 GMT

ಮಲ್ಪೆ, ಎ.9: ವೈಯಕ್ತಿಕ ಕಾರಣಕ್ಕೆ ಮನನೊಂದು ಫಾಸ್ಟ್‌ಪುಡ್ ಅಂಗಡಿ ನಡೆಸುತ್ತಿದ್ದ ವ್ಯಕ್ತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ಮಲ್ಪೆಪಡುಕೆರೆ ಬೀಚ್ ಬಳಿ ಶಾಂತಿನಗರ ಎಂಬಲ್ಲಿ ನಡೆದಿದೆ.

ಮೃತರನ್ನು ಮೂಡುಬೆಟ್ಟು ಚಂದ್ರಕಟ್ಟ ನಿವಾಸಿ ನೀಲಪ್ಪ ರಾಮಣ್ಣ ಗೋಡಿ (30) ಎಂದು ಗುರುತಿಸಲಾಗಿದೆ. ಇವರು ಉಡುಪಿಯಲ್ಲಿ ಪಾಸ್ಟ್ಪುಡ್ ಅಂಗಡಿ ನಡೆಸುತ್ತಿದ್ದು, ಸಾಲದ ವಿಚಾರ ಅಥವಾ ವೈಯಕ್ತಿಕ ಕಾರಣದಿಂದ ಮನನೊಂದು ಎ.6ರಿಂದ ಎ.8ರ ಮಧ್ಯಾವಧಿಯಲ್ಲಿ ಶಾಂತಿನಗರದ ಬೀಚ್ ಬಳಿ ತೆಂಗಿನ ತೋಟದ ಮದ್ಯದಲ್ಲಿರುವ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News