ಎರಡು ಚಿನ್ನದ ಪದಕ ಹಾಗೂ ನಾಲ್ಕು ನಗದು ಪುರಸ್ಕಾರ ಪಡೆದ ಗ್ರಾಮೀಣ ಪ್ರತಿಭೆ ಸುಕನ್ಯಾ

Update: 2021-04-10 17:00 GMT

ಮಂಗಳೂರು,ಎ.10: ಉಡುಪಿಯ ಡಾ. ಜಿ. ಶಂಕರ್ ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಅಜ್ಜರಕಾಡು ಸ್ನಾತಕೋತ್ತರ ಅಧ್ಯಯನ ಕೇಂದ್ರದ ಸುಕನ್ಯಾ ಅವರು ಇತಿಹಾಸ ಸ್ನಾತಕೋತ್ತರ ಪದವಿಯಲ್ಲಿ ಎರಡು ಚಿನ್ನದ ಪದಕ ಮತ್ತು ನಾಲ್ಕು ನಗದು ಬಹುಮಾನಗಳನ್ನು ಪಡೆದುಕೊಂಡಿದ್ದಾರೆ. ಇವರ ಈ ಸಾಧನೆಗೆ ತಮ್ಮ ಪ್ರೌಢಶಾಲೆಯ ಶಿಕ್ಷಿಕಿ ರೇವತಿ ಅವರೇ ಪ್ರೇರಣೆಯಂತೆ.

ಇವರು ರಾಜೀವ್‌ ಪೂಜಾರಿ- ಮಾಲತಿ ದಂಪತಿಯ ಪುತ್ರಿ. ಈಗಾಗಲೇ ಎಂ.ಎಸ್‌. ಡಬ್ಲ್ಯೂ ಪೂರೈಸಿರುವ ಇವರಿಗೆ ಇತಿಹಾಸ ಪ್ರಾಧ್ಯಾಪಿಕೆಯಾಗುವ ಬಯಕೆ ಹೊಂದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News