ಎಸ್ಸೆಸ್ಸೆಫ್ ಕಾಜೂರು ಯುನಿಟ್‌ ವತಿಯಿಂದ ಸೆಮಿನಾರ್, ಅನುಸ್ಮರಣಾ ಕಾರ್ಯಕ್ರಮ

Update: 2021-04-11 16:08 GMT

ಬೆಳ್ತಂಗಡಿ : ಕರ್ನಾಟಕ‌ ರಾಜ್ಯ ಸುನ್ನೀ ಸ್ಟೂಡೆಂಟ್ಸ್ ಫೆಡರೇಶನ್ (ಎಸ್ಸೆಸ್ಸೆಫ್) ಕಾಜೂರು ಯುನಿಟ್‌ ವತಿಯಿಂದ ಯುನಿಟ್ ಕಾರ್ಯಕರ್ತರ ಸೆಮಿನಾರ್ ಹಾಗೂ ಶೈಖುನಾ ತಾಜುಶ್ಶರಿಅಃ ಅಲಿಕುಂಞಿ ಉಸ್ತಾದರ ಅನುಸ್ಮರಣಾ ಕಾರ್ಯಕ್ರಮವು ಕಾಜೂರು ದರ್ಗಾ ವಠಾರದಲ್ಲಿ ನಡೆಯಿತು.

ಈ ಕಾರ್ಯಕ್ರಮವನ್ನು ರಹ್ಮಾನಿಯ ಜುಮಾ ಮಸ್ಜಿದ್ ಮತ್ತು ದರ್ಗಾ ಶರೀಫ್ ಅಧ್ಯಕ್ಷರಾದ ಕೆ.ಯು.ಇಬ್ರಾಹಿಂ ಉದ್ಘಾಟಿಸಿದರು. ಎಸ್ಸೆಸ್ಸೆಫ್ ಕರ್ನಾಟಕ ರಾಜ್ಯ ನಿಕಟಪೂರ್ವ ಕಾರ್ಯದರ್ಶಿ ಸಿರಾಜುದ್ದೀನ್ ಸಖಾಫಿ ಕನ್ಯಾನ ತರಗತಿಯನ್ನು ಮಂಡಿಸಿದರು.

ಎಸ್ಸೆಸ್ಸೆಫ್ ದ.ಕ ಜಿಲ್ಲೆ ನಿಕಟಪೂರ್ವ ಕಾರ್ಯದರ್ಶಿ ರಶೀದ್ ಹಾಜಿ ವಗ್ಗ, ಎಸ್ಸೆಸ್ಸೆಫ್ ದ.ಕ ಜಿಲ್ಲೆ  ಈಸ್ಟ್ ಸದಸ್ಯರಾದ ರಶೀದ್ ಮದನಿ ಹಾಗೂ ಕಾಜೂರು ಯುನಿಟ್ ಮಾಜಿ ಅಧ್ಯಕ್ಷರಾದ ಕೆ.ಎಂ ಕಮಾಲ್ ಆಶಂಸ ಭಾಷಣ ಮಾಡಿದರು.

ಈ ಕಾರ್ಯಕ್ರಮದಲ್ಲಿ ರಹ್ಮಾನಿಯ ಜುಮಾ ಮಸ್ಜಿದ್ ಮತ್ತು ದರ್ಗಾ ಶರೀಫ್ ಕಾಜೂರು ಪ್ರ.ಕಾರ್ಯದರ್ಶಿ ಸಿದ್ದೀಕ್ ಜೆ.ಎಚ್, ಉಪಾಧ್ಯಕ್ಷರಾದ ಅಬ್ದುರ್ರಹ್ಮಾನ್ ಸದಸ್ಯರಾದ ಸಿದ್ದೀಕ್ ಕೆ.ಎಚ್,ಮಾಜಿ ಅಧ್ಯಕ್ಷರಾದ ಮುಹಮ್ಮದ್ ಪಿ.ಎ ಆರ್‌ಡಿಸಿ ಅಧ್ಯಕ್ಷರಾದ ಶರೀಫ್ ಸದಸ್ಯರಾದ ಸಲೀಂ ಎಸ್ಸೆಸ್ಸೆಫ್ ಬೆಳ್ತಂಗಡಿ ಡಿವಿಷನ್ ಕಾರ್ಯದರ್ಶಿ ಮುಹಮ್ಮದ್ ಮುಬೀನ್ ಉಜಿರೆ, ಉಜಿರೆ ಸೆಕ್ಟರ್ ಸದಸ್ಯರಾದ ನಝೀರ್ ಎಂ.ಎಸ್. ಯುನಿಟ್ ಅಧ್ಯಕ್ಷರಾದ ಸಿರಾಜುದ್ದೀನ್, ಪ್ರ.ಕಾರ್ಯದರ್ಶಿ ಅಬ್ದುಲ್ ಜಬ್ಬಾರ್,ಕೋಶಾಧಿಕಾರಿ ಶೌಖತ್ ಅಲಿ ಹಾಗೂ ಯುನಿಟ್ ಸದಸ್ಯರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

ಎಸ್ಸೆಸ್ಸೆಫ್ ಕಾಜೂರು ಯುನಿಟ್ ಕಾರ್ಯದರ್ಶಿ ನವಾಝ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News