×
Ad

ಕಸ್ತೂರಿ ರಂಗನ್ ವರದಿ, ಸಿಆರ್‌ಝಡ್ ಸಮಸ್ಯೆ ಬಗ್ಗೆ ಹೋರಾಟ: ವಿನಯಕುಮಾರ್ ಸೊರಕೆ

Update: 2021-04-12 18:49 IST

ಉಡುಪಿ, ಎ.12: ಜಿಲ್ಲೆಯ ಮಲೆನಾಡು ಪರಿಸರದಲ್ಲಿ ಕಸ್ತೂರಿ ರಂಗನ್ ವರದಿಯ ಅನುಷ್ಠಾನದಿಂದ ಜನರಿಗಾಗುತ್ತಿರುವ ಸಂಕಷ್ಟ, ಕರಾವಳಿ ಪರಿಸರದಲ್ಲಿ ಸಿಆರ್‌ಝಡ್ (ಕರಾವಳಿ ನಿಯಂತ್ರಣ ವಲಯ) ಸಮಸ್ಯೆಯೂ ಸೇರಿದಂತೆ ಕೇಂದ್ರದ ಕೆಲವೊಂದು ಅವೈಜ್ಞಾನಿಕ ಕಾನೂನುಗಳು ಜಿಲ್ಲೆಯ ಜನರಲ್ಲಿ ಆತಂಕ ಸೃಷ್ಠಿಸಿದ್ದು, ಇದನ್ನು ನಿಭಾಯಿಸುವ ನಿಟ್ಟಿನಲ್ಲಿ ಪಕ್ಷ ಜನಮನಕ್ಕೆ ಸ್ಪಂದಿಸಿ ಸಂಘಟಿತ ಹೋರಾಟ ನಡೆಸುವುದು ಎಂದು ಮಾಜಿ ಸಚಿವ ವಿನಯಕುಮಾರ್ ಸೊರಕೆ ಹೇಳಿದ್ದಾರೆ.

ಬ್ರಹ್ಮಗಿರಿಯಲ್ಲಿರುವ ಜಿಲ್ಲಾ ಕಾಂಗ್ರೆಸ್‌ಭವನದಲ್ಲಿ ನಡೆದ ಜಿಲ್ಲಾ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಅವರು ಮಾತಾಡುತ್ತಿದ್ದರು. ಈ ನಿಟ್ಟಿನಲ್ಲಿ ನಾವು ಈಗಾಗಲೇ ಹಮ್ಮಿಕೊಂಡಿರುವ ಪಾದಯಾತ್ರೆ ಉತ್ತಮ ಫಲಿತಾಂಶ ನೀಡಿದೆ. ಮುಂದಿನ ದಿನಗಳಲ್ಲಿ ಕಸ್ತೂರಿ ರಂಗನ್ ವರದಿ ಯಿಂದ ಸಂತೃಸ್ತರಾದ ಜಿಲ್ಲೆಯ ಮಲೆನಾಡು ಪರಿಸರಗಳಲ್ಲಿಯೂ ಈ ಪಾದಯಾತ್ರೆ ಕಾರ್ಯಕ್ರಮವನ್ನು ಮುಂದುವರಿಸಲಾಗುವುದು ಎಂದು ಅವರು ತಿಳಿಸಿದರು.

ಕಾಂಗ್ರೆಸ್ ಜಿಲ್ಲಾದ್ಯಕ್ಷ ಅಶೋಕ್‌ಕುಮಾರ್ ಕೊಡವೂರು ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಪಕ್ಷದ ಪ್ರತಿಯೊಬ್ಬ ಕಾರ್ಯಕರ್ತನ ಅಭಿಪ್ರಾಯಗಳೂ ಅಮೂಲ್ಯ. ಭಿನ್ನಾಭಿಪ್ರಾಯಗಳು ಸಹಜವಾದರೂ ಕಚ್ಛಾಟರಹಿತವಾಗಿ ತಳಮಟ್ಟದಿಂದ ಪಕ್ಷಕ್ಕೆ ವೇದಿಕೆ ಒದಗಿಸಿ ಸಂಘಟಿಸಿ ಮುಂದಿನ ಜಿಲ್ಲಾ ಪಂಚಾಯತ್ ಹಾಗೂ ತಾಲೂಕು ಪಂಚಾಯತ್ ಚುನಾವಣೆಯನ್ನು ಎದುರಿಸಲು ಸಿದ್ಧರಾಗೋಣ ಎಂದರು.

ಕೊರೋನ ಕಾರಣದಿಂದಾಗಿ ಈ ಚುನಾವಣೆ ಹಿಂದೆ ಹೋಗಬಹುದೆಂಬ ವಿಶ್ವಾಸ ಬೇಡ. ಯಾಕೆಂದರೆ ಈ ಸರಕಾರ ಕೊರೋನ ಮಹಾಮಾರಿ ಯನ್ನು ಮುಂದಿಟ್ಟುಕೊಂಡೇ ರಾಜಕೀಯ ಮಾಡುತ್ತಿದೆ ಎಂದು ಅಶೋಕಕುಮಾರ್ ಕೊಡವೂರು ಹೇಳಿದರು.

ಸಭೆಯಲ್ಲಿ, ರಾಜ್ಯ ಸರಕಾರ ಜಿಪಂ, ತಾಪಂ, ಕ್ಷೇತ್ರದ ವ್ಯಾಪ್ತಿಯನ್ನು ತನಗೆ ಪೂರಕವಾಗುವ ರೀತಿಯಲ್ಲಿ ಬೇಕಾಬಿಟ್ಟಿ ಅವೈಜ್ಞಾನಿಕ ರೀತಿಯಲ್ಲಿ ಬದಲಿಸಿದೆ. ಬಿಜೆಪಿಯವರಿಗೆ ಈಗಾಗಲೇ ಚುನಾವಣೆಯ ದಿನ ಮತ್ತು ಮೀಸಲಾತಿಯ ಪೂರ್ಣ ಮಾಹಿತಿ ದೊರೆತಿದೆ ಎನ್ನುವ ಒಕ್ಕೊರಲ ಅಭಿಪ್ರಾಯ ವ್ಯಕ್ತವಾಯಿತು.

ಕೆಪಿಸಿಸಿ ಮಾಜಿ ಪ್ರಧಾನ ಕಾರ್ಯದರ್ಶಿ ಎಂ.ಎ.ಗಫೂರ್ ಉಪಸ್ಥಿತರಿದ್ದು ಮಾತಾ ಡಿದರು. ಡಿಸಿಸಿ. ಪ್ರದಾನ ಕಾರ್ಯದರ್ಶಿ ಅಲೆವೂರು ಹರೀಶ್ ಕಿಣಿ ಸ್ವಾಗತಿಸಿದರು. ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ಹಬೀಬ್ ಅಲಿ ವಂದಿಸಿದರು.

ಈ ಸಂದರ್ಭದಲ್ಲಿ ಪಕ್ಷದ ಮುಖಂಡರಾದ ಬಿ. ಹಿರಿಯಣ್ಣ, ನೀರೆ ಕೃಷ್ಣ ಶೆಟ್ಟಿ, ದೇವಕಿ ಸಣ್ಣಯ್ಯ, ಸುಧಾಕರ ಕೋಟ್ಯಾನ್, ಶಬ್ಬೀರ್ ಅಹ್ಮದ್, ಬಿ. ನರಸಿಂಹ ಮೂರ್ತಿ, ಕಿಶನ್ ಹೆಗ್ಡೆ ಕೊಳ್ಕೆಬೈಲ್, ಕೆ. ಅಣ್ಣಯ್ಯ ಶೇರಿಗಾರ್, ಬಿಪಿನ್ ಚಂದ್ರಪಾಲ್, ವೈ. ಸುಕುಮಾರ್ ಪಡುಬಿದ್ರಿ, ಎಚ್. ನಿತ್ಯಾನಂದ ಶೆಟ್ಟಿ, ಮುಷ್ತಾಕ್ ಅಹ್ಮದ್, ಭುಜಂಗ ಶೆಟ್ಟಿ, ಉದ್ಯಾವರ ನಾಗೇಶ್ ಕುಮಾರ್, ಚಂದ್ರಶೇಖರ್ ಶೆಟ್ಟಿ, ಮಂಜುನಾಥ ಪೂಜಾರಿ, ಸದಾಶಿವ ದೇವಾಡಿಗ, ಸತೀಶ್ ಅಮೀನ್ ಪಡುಕೆರೆ, ದಿನಕರ್ ಹೇರೂರು, ಕಿಶೋರ್ ಕುಮಾರ್ ಎರ್ಮಾಳ್, ಗೀತಾ ವಾಗ್ಳೆ, ಶಶಿಧರ ಶೆಟ್ಟಿ ಎಲ್ಲೂರು, ರೋಶನಿ ಒಲಿವರ್, ಬಾಲಕೃಷ್ಣ ಪೂಜಾರಿ, ಎಂ.ಪಿ. ಮೊಯ್ದಿನಬ್ಬ್ಬ, ದಿಲೀಪ್ ಹೆಗ್ಡೆ, ಕೇಶವ ಕೋಟ್ಯಾನ್, ಡಾ. ಸುನೀತಾ ಶೆಟ್ಟಿ, ಲೂಯಿಸ್ ಲೋಬೋ, ದೀವಾ ನಂಬಿಯಾರ್, ರೇವತಿ ಶೆಟ್ಟಿ, ಉಪೇಂದ್ರ ಗಾಣಿಗ, ಸಂಜೀವ ಜಿ. ಸಾಲ್ಯಾನ್, ರಾಜೇಶ್ ಶೆಟ್ಟಿ ಬ್ರಹ್ಮಾವರ, ಸುಬೋದ್ ಶೆಟ್ಟಿ ಕಾರ್ಕಳ, ಡಾ. ಯಾದವ ರಾವ್ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News