ಜಮೀಯತುಲ್ ಫಲಾಹ್ ಬೆಳ್ತಂಗಡಿ ಘಟಕದ ವತಿಯಿಂದ ರಂಝಾನ್ ಕಿಟ್ ವಿತರಣೆ

Update: 2021-04-13 16:19 GMT

ಬೆಳ್ತಂಗಡಿ: ಜಮೀಯತುಲ್ ಫಲಾಹ್ ಬೆಳ್ತಂಗಡಿ ಘಟಕದ ವತಿಯಿಂದ ಅರ್ಹ ಫಲಾನುಭವಿಗಳಾದ  220 ಕುಟುಂಬಗಳಿಗೆ ರಂಝಾನ್ ವಿಶೇಷ ಕಿಟ್ ಹಾಗೂ ಹಾಜಿ‌ ಅಬ್ದುಲ್ಲತೀಫ್ ಸಾಹೇಬ್ ಅವರ ವತಿಯಿಂದ ವಸ್ತ್ರ ದಾನ ಮಂಗಳವಾರ ನಡೆಯಿತು.

ಜಮೀಯತುಲ್ ಫಲಾಹ್ ಮುಖಾಂತರ ವಿತರಣೆಯಾದ ಈ ಕಿಟ್ ಸಂಯೋಜನೆಯಲ್ಲಿ ಜಮೀಯತುಲ್ ಫಲಾಹ್ ಅನಿವಾಸಿ ಭಾರತೀಯ ಸದಸ್ಯರು ಹಾಗೂ ಘಟಕದ ಸದಸ್ಯರು ದೇಣಿಗೆ ನೀಡಿರುತ್ತಾರೆ. ಸಮಾರಂಭದ ಅಧ್ಯಕ್ಷತೆಯನ್ನು ಜಮೀಯತುಲ್ ಫಲಾಹ್ ಬೆಳ್ತಂಗಡಿ ಘಟಕದ ಅಧ್ಯಕ್ಷ ಹಾಜಿ ಅಬ್ದುಲ್ಲತೀಫ್ ಸಾಹೇಬ್ ಕೊಲ್ಪೆದಬೈಲು ವಹಿಸಿದ್ದರು.

ಈ ಸಂದರ್ಭ ಉಪಾಧ್ಯಕ್ಷ ಅಶ್ರಫ್ ಚಿಲಿಂಬಿ, ಪ್ರಧಾನ ಕಾರ್ಯದರ್ಶಿ ಹೈದರ್ ನೀರ್ಸಾಲ್, ಕೋಶಾಧಿಕಾರಿ ಕೆ.ಎಸ್ ಅಬ್ದುಲ್ಲ, ಪ್ರಮುಖರಾದ ಎಸ್.ಎಂ ಕೋಯ ಉಜಿರೆ, ಆಲಿಯಬ್ಬ ಪುಲಾಬೆ, ಅಬ್ಬೋನು ಮದ್ದಡ್ಕ, ಕೆ.ಎಸ್ ಅಬೂಬಕ್ಕರ್, ಕಾಸಿಂ ಮಲ್ಲಿಗೆಮನೆ, ಕಾಸಿಂ‌ಪದ್ಮುಂಜ, ಉಮರ್ ಬೆಳ್ತಂಗಡಿ, ಹಕೀಂ, ಕೆ.ಎಸ್ ಅಬೂಬಕರ್ , ವಿ.ಆರ್ ಅಬ್ದುಲ್ ರಹಿಮಾನ್, ಉಮರ್‌ಕುಂಞಿ ನಾಡ್ಜೆ, ಅಕ್ಬರ್ ಬೆಳ್ತಂಗಡಿ, ಖಾಲಿದ್ ಪುಲಾಬೆ , ಹಮೀದ್ ಪುಲಾಬೆ, ಯು.ಹೆಚ್ ಮುಹಮ್ಮದ್, ಇಲ್ಯಾಸ್ ಕರಾಯ, ಅಬ್ಬಾಸ್ ಸುನ್ನತ್‌ಕೆರೆ, ಶೇಕುಂಞಿ ಬೆಳ್ತಂಗಡಿ ಮೊದಲಾದವರು ಉಪಸ್ಥಿತರಿದ್ದರು.

ಜಮಾಲುದ್ದೀನ್‌ ಲೆತೀಫಿ ಲಾಡಿ ದುಆ ನೆರವೇರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News