ಬೆಳ್ತಂಗಡಿ: 25 ಮದರಸ ಅಧ್ಯಾಪಕರಿಗೆ ರಮಝಾನ್ ಕಿಟ್ ವಿತರಣೆ

Update: 2021-04-13 16:23 GMT

ಬೆಳ್ತಂಗಡಿ: ಸುನ್ನೀ ಮೆನೇಜ್‌ಮೆಂಟ್ ಅಸೋಸಿಯೇಷನ್ ಎಸ್‌ಎಮ್‌ಎ ಮಡಂತ್ಯಾರು ರೀಜಿನಲ್, ಸುನ್ನೀ ಜಂಇಯ್ಯತುಲ್ ಮುಅಲ್ಲಿಮೀನ್ ಎಸ್‌ಜೆ‌ಎಮ್ ಮಡಂತ್ಯಾರು ರೇಂಜ್ ಇದರ ವತಿಯಿಂದ ತಾಜುಶ್ಶರೀಅ ಆಲಿಕುಂಞಿ ಉಸ್ತಾದ್ ಅನುಸ್ಮರಣೆ ಹಾಗೂ ರಮಝಾನ್ ಪ್ರಯುಕ್ತ 25 ಮದರಸ ಅಧ್ಯಾಪಕರಿಗೆ ಆಹಾರದ ಕಿಟ್ ವಿತರಣೆ ಮಂಗಳವಾರ ನಡೆಯಿತು.

ಮದ್ದಡ್ಕ‌ನೂರುಲ್ ಹುದಾ ಮದರಸ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮ ದ ಅಧ್ಯಕ್ಷತೆಯನ್ನು ಎಸ್‌ಎಮ್ಎ ಅಧ್ಯಕ್ಷ ಅಶ್ರಫ್ ಚಿಲಿಂಬಿ ವಹಿಸಿದ್ದರು. ಉದ್ಘಾಟನೆಯನ್ನು ಮುಹಮ್ಮದ್ ರಫೀಕ್ ಅಹ್ಸನಿ ನೆರವೇರಿಸಿದರು.

ಅಬ್ದುರ್ರಝಾಕ್ ಸಖಾಫಿ ಮಡಂತ್ಯಾರು ಅನುಸ್ಮರಣಾ ಭಾಷಣ ನಡೆಸಿದರು. ಸಯ್ಯಿದ್ ಅಬ್ದುಸ್ಸಲಾಂ ತಂಙಳ್, ಸಯ್ಯಿದ್ ಬದ್ರುದ್ದೀನ್ ತಂಙಳ್ ಪೊಮ್ಮಾಜೆ, ಮದ್ದಡ್ಕ‌ ಮಸ್ಜಿದ್ ಅಧ್ಯಕ್ಷ ಬದ್ರುದ್ದೀನ್ ಮಾಸ್ಟರ್, ಉಪಾಧ್ಯಕ್ಷ ಎಚ್.ಎಂ ಹಸನಬ್ಬ, ಯಾಕೂಬ್ ಮುಸ್ಲಿಯಾರ್ ಪಣಕಜೆ, ಅಬ್ಬೋಣು ಮದ್ದಡ್ಕ, ಎಂ.ಎಚ್ ಅಬೂಬಕ್ಕರ್, ಅಬ್ಬಾಸ್ ಸುಪಾರಿ, ಮೊದಲಾದವರು ಉಪಸ್ಥಿತರಿದ್ದರು.

ಎಸ್‌ಎಮ್‌ಎ ಕಾರ್ಯದರ್ಶಿ ಜಮಾಲುದ್ದೀನ್‌ ಲೆತೀಫಿ ಲಾಡಿ ಸ್ವಾಗತಿಸಿದರು. ತ್ವಾಹಿರ್ ಸಖಾಫಿ ಮಡಂತ್ಯಾರು ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News