ಬಾಲಕ ಆಕೀಫ್ ಕುಟುಂಬಕ್ಕೆ ಪರಿಹಾರ ನೀಡಲು ಲೀಗ್ ಮನವಿ
Update: 2021-04-14 16:02 GMT
ಮಂಗಳೂರು,ಎ.14: ವಿದ್ಯಾರ್ಥಿ ಹಾಗೂ ಯುವಜನಾಂಗಕ್ಕೆ ಮಾರಕವಾದ ಪಬ್ಜಿ ಆಟವನ್ನು ನಿಷೇಧಿಸಬೇಕು ಮತ್ತು ಕೆಸಿ ರೋಡ್ನಲ್ಲಿ ಹತ್ಯೆಗೀಡಾದ ಬಾಲಕ ಆಕೀಫ್ ಕುಟುಂಬಕ್ಕೆ 25 ಲಕ್ಷ ರೂ. ಪರಿಹಾರ ನೀಡಬೇಕು, ಈ ಕುಟುಂಬದ ಒಬ್ಬ ಸದಸ್ಯರಿಗೆ ಸರಕಾರಿ ಉದ್ಯೋಗ ನೀಡಬೇಕು ಎಂದು ಮುಸ್ಲಿಂ ಲೀಗ್ ಮಂಗಳೂರು ನಗರ ಸಮಿತಿಯು ದಕ.ಜಿಲ್ಲಾಧಿಕಾರಿಯ ಮೂಲಕ ರಾಜ್ಯ ಸರಕಾರಕ್ಕೆ ಮನವಿ ಸಲ್ಲಿಸಿದೆ.
ಈ ಸಂರ್ಭ ಮುಸ್ಲಿಂ ಲೀಗ್ ಕಾರ್ಯದರ್ಶಿ ಮುಹಮ್ಮದ್ ಇಸ್ಮಾಯೀಲ್, ರಿಯಾಝ್ ಹರೇಕಳ, ಶಬೀರ್ ಮತ್ತಿತರರು ಉಪಸ್ಥಿತರಿದ್ದರು.