×
Ad

ಬ್ರಹ್ಮಾವರ: ಗೋಡೆ ಕುಸಿದು ವಲಸೆ ಕಾರ್ಮಿಕ ಮೃತ್ಯು

Update: 2021-04-14 23:05 IST
ಸಾಂದರ್ಭಿಕ ಚಿತ್ರ

ಬ್ರಹ್ಮಾವರ, ಎ.14: ಮನೆಯ ಗೋಡೆ ಕುಸಿದ ಪರಿಣಾಮ ವಲಸೆ ಕಾರ್ಮಿಕ ರೊಬ್ಬರು ಮೃತಪಟ್ಟ ಘಟನೆ ಚಾಂತಾರು ಗ್ರಾಮದ ಚೇತನ ನಗರ ಎಂಬಲ್ಲಿ ಎ.13ರಂದು ಬೆಳಗ್ಗೆ ನಡೆದಿದೆ.

ಮೃತರನ್ನು ಬ್ರಹ್ಮಾವರ ಮಹಾಲಿಂಗೇಶ್ವರ ದೇವಸ್ಥಾನದ ಬಳಿ ಬಾಡಿಗೆ ಮನೆ ನಿವಾಸಿ ಕೊಪ್ಪಳ ಜಿಲ್ಲೆಯ ಹನುಮಂತ(35) ಎಂದು ಗುರುತಿಸಲಾಗಿದೆ. ಇವರು ಗಣಪತಿ ಎಂಬವರ ಮನೆಯ ಮನೆಯ ಮೇಲ್ ಛಾವಣಿಯ ಗೋಡೆ ಯನ್ನು ಒಡೆಯುತ್ತಿದ್ದಾಗ ಗೋಡೆಯು ಹನುಮಂತರ ಮೈಮೇಲೆ ಬಿತ್ತೆನ್ನಲಾಗಿದೆ. ಇದರಿಂದ ಗೋಡೆ ಅಡಿ ಸಿಲುಕಿ ಗಂಭೀರವಾಗಿ ಗಾಯಗೊಂಡ ಹನುಮಂತ, ಬ್ರಹ್ಮಾವರ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗ ಮೃತಪಟ್ಟರು.

ಹನುಮಂತರ ಮರಣಕ್ಕೆ ಮೇಸ್ತ್ರಿ ನರಸಿಂಹ ನಾಯಕ್ ಹಾಗೂ ಮನೆಯ ಮಾಲಿಕ ಗಣಪತಿ ಎಂಬವರು ಯಾವುದೇ ಮುನ್ನೆಚ್ಚರಿಕೆ ಹಾಗೂ ಸುರಕ್ಷತಾ ಕ್ರಮ ಅನುಸರಿಸದೆ ನಿರ್ಲಕ್ಷತನದಿಂದ ಕಾಮಗಾರಿ ನಡೆಸಿರುವುದೇ ಕಾರಣ ಎಂಬುದಾಗಿ ನೀಡಿದ ದೂರಿನಂತೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News