ಎ.18 ರಂದು ಕಾಗೋಡ ರೈತ ಸತ್ಯಾಗ್ರಹ 70 ನೇ ವರ್ಷಾಚರಣೆ

Update: 2021-04-15 11:43 GMT

ಶಿರಸಿ: ಉಳುವವನೇ ಹೊಲದೊಡೆಯ ಭೂಮಿಯ ಹಕ್ಕನ್ನು ನೀಡಬೇಕೆಂದು ಆರಂಭಿತವಾದ ಕಾಗೋಡ ಸತ್ಯಾಗ್ರಹ ಚಳುವಳಿಗೆ ಇದೇ ಎ.18 ರಂದು 70ನೇ ವರ್ಷಕ್ಕೆ ಪಾದಾರ್ಪಣೆ ಆಗುತ್ತಿದ್ದು, ಈ ಸಂದರ್ಭದಲ್ಲಿ ಇದರ ಅಂಗವಾಗಿ ಎ.18 ರಂದು ಕಾಗೋಡ ರೈತ ಸತ್ಯಾಗ್ರಹ 70 ನೇ ವರ್ಷಾಚರಣೆ ಕಾರ್ಯಕ್ರಮ ಸಾಗರದಲ್ಲಿ ಜರುಗಲಿದೆ.

ಕಾಗೋಡು ರೈತ ಚಳುವಳಿ ಸಂಸ್ಮರಣಾ ಸಮಿತಿ ಹಾಗೂ ಡಾ.ರಾಮ ಮನೋಹರ ಲೋಹಿಯಾ ಸಂಯುಕ್ತ ಆಶ್ರಯದಲ್ಲಿ, ಸಾಗರ ತಾಲೂಕಿನ ಕಣಸೆ ಜಟ್ಯಪ್ಪ ನಾಯ್ಕ ವೇದಿಕೆಯ ಕಾಗೋಡ ತಿಮ್ಮಪ್ಪ ರಂಗಮಂದಿರದ ಆವರಣದಲ್ಲ್ಲಿ ಅಂದು ಮುಂಜಾನೆ 11 ಗಂಟೆಗೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ಕಾರ್ಯಕ್ರಮವನ್ನು ರೈತ ನಾಯಕ ಪ್ರೊ.ಯೋಗೇಂದ್ರ ಯಾದವ್ ಉದ್ಘಾಟಿಸಲಿದ್ದಾರೆ. ಸಮಾಜವಾದಿ ಹಿರಿಯ ನಾಯಕರು ಮತ್ತು ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ. ಮಾಜಿ ಮುಖ್ಯಮಂತ್ರಿ ಹಾಗೂ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಸಮಾರೋಪ ಭಾಷಣ ಮಾಡಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News