ಪುತ್ತೂರು: ರೈಲ್ವೇ ಹಳಿಯಲ್ಲಿ ರುಂಡ ಬೇರ್ಪಟ್ಟ ಸ್ಥಿತಿಯಲ್ಲಿ ಯುವಕನ ಮೃತದೇಹ ಪತ್ತೆ

Update: 2021-04-15 14:33 GMT

ಪುತ್ತೂರು: ಯುವಕನೋರ್ವನ ಮೃತದೇಹ ರುಂಡ ಬೇರ್ಪಟ್ಟ ಸ್ಥಿತಿಯಲ್ಲಿ ಗುರುವಾರ ಪುತ್ತೂರು-ಕಾಣಿಯೂರು ರೈಲು ಮಾರ್ಗದ ಸವಣೂರು ಗೇಟ್ ಬಳಿಯ ಹಳಿಯಲ್ಲಿ ಪತ್ತೆಯಾಗಿದೆ. 

ಮೃತಪಟ್ಟ ಯುವಕನನ್ನು ಕಡಬ ತಾಲೂಕಿನ ಪುಣ್ಚಪ್ಪಾಡಿ ಗ್ರಾಮದ ದೇವಸ್ಯ ದಂಬೆ ನಿವಾಸಿ ದಿ. ಬಾಲಕೃಷ್ಣ ರೈ ಎಂಬವರ ಪುತ್ರ ಮಹೇಶ್ ಯಾನೆ ಸನ್ನು(34) ಎಂದು ಗುರುತಿಸಲಾಗಿದೆ. ಈತ ರೈಲು ಸಂಚರಿಸುವ ಸಂದರ್ಭದಲ್ಲಿ ರೈಲಿನಡಿಗೆ ತಲೆಯಿಟ್ಟು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಶಂಕಿಸಲಾಗಿದೆ. 

ರೈಲ್ವೇ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News