ಕಾರ್ಕಳ: ಕ್ರಿಶ್ಚಿಯನ್ ವಿವಾಹ ನೋಂದಣಾಧಿಕಾರಿಯಾಗಿ ನ್ಯಾಯವಾದಿ ರೀಮಾ ಸ್ವೀತಾ ಪಿರೇರಾ ನೇಮಕ
Update: 2021-04-15 14:37 GMT
ಕಾರ್ಕಳ, ಎ.15: ಕಾರ್ಕಳದಲ್ಲಿ ನ್ಯಾಯವಾದಿಯಾಗಿರುವ ರೀಮಾ ಸ್ವೀತಾ ಪಿರೇರಾ ಇವರನ್ನು ಉಡುಪಿ ಜಿಲ್ಲಾ ವ್ಯಾಪ್ತಿಗೆ ಭಾರತೀಯ ಕ್ರಿಶ್ಚಿಯನ್ ವಿವಾಹ ನೋಂದಣಾಧಿಕಾರಿಯನ್ನಾಗಿ ನೇಮಿಸಿ ಕನಾಟರ್ಕ ಸರಕಾರ ಆದೇಶ ಹೊರಡಿಸಿದೆ.
ರೀಮಾ ಸ್ವೀತಾ ಪಿರೇರಾ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಕ್ರಿಶ್ಚಿಯನ್ ಜನಾಂಗದ ವಿವಾಹ ನೋಂದಣಾಧಿಕಾರಿಯಾಗಿ ನೇಮಕಗೊಳಿಸಿದ್ದು, ಮುಂದಿನ ಆದೇಶದವರೆಗೆ ನೇಮಕ ಜಾರಿಯಲ್ಲಿರುತ್ತದೆ.