ಬಂದರ್: ಅವ್ಯವಸ್ಥೆ ಸರಿಪಡಿಸಲು ಮುಸ್ಲಿಂ ಲೀಗ್ ಮನವಿ
Update: 2021-04-15 15:14 GMT
ಮಂಗಳೂರು, ಎ.15: ನಗರದ ಬಂದರ್ ಪ್ರದೇಶದಲ್ಲಿ ರಸ್ತೆ, ಫುಟ್ಪಾತ್, ಒಳಚರಂಡಿ, ತೆರೆದ ಚರಂಡಿ ಸಮಸ್ಯೆಯಿಂದ ಕೂಡಿದ್ದು, ಜನರು ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ. ಅಲ್ಲದೆ ಬಂದರ್ ಆಸುಪಾಸಿಮ ಕುದ್ರೋಳಿ, ಕರ್ಬಲಾ ರಸ್ತೆ, ಅನ್ಸಾರಿ ರಸ್ತೆ, ಪೋರ್ಟ್ ರಸ್ತೆ, ಕೃಷ್ಣ ಮಿಲ್ ರಸ್ತೆ, ಚೇಂಬರ್ ರಸ್ತೆ ಸಹಿತ ಎಲ್ಲಾ ರಸ್ತೆಗಳು ಜನ ಸಂಚಾರಕ್ಕೂ, ವಾಹನಗಳ ಓಡಾಟಕ್ಕೂ ಅಯೋಗ್ಯವಾಗಿದೆ. ದಿನನಿತ್ಯ ವಾಹನಿಗರು ಇಲ್ಲಿ ಪರದಾಡುವಂತಾಗಿದೆ. ಧೂಳು, ಕೆಸರಿನಿಂದಾಗಿ ಜನರ ಆರೋಗ್ಯದ ಮೇಲೂ ಪರಿಣಾಮ ಬಿದ್ದಿದೆ. ಹಾಗಾಗಿ ಈ ಪ್ರದೇಶದ ಅವ್ಯವಸ್ಥೆಯನ್ನು ಸರಿಪಡಿಸಬೇಕು ಎಂದು ಆಗ್ರಹಿಸಿ ಮುಸ್ಲಿಂ ಲೀಗ್ ಮಂಗಳೂರು ನಗರ ಸಮಿತಿಯು ಜಿಲ್ಲಾಧಿಕಾರಿಗೆ ಮನವಿ ಮಾಡಿದೆ.
ಈ ಸಂದರ್ಭ ಲೀಗ್ ಮುಖಂಡ ಮುಹಮ್ಮದ್ ಇಸ್ಮಾಯೀಲ್, ಶಮೀರ್ ಅಹ್ಮದ್, ರಿಯಾಝ್ ಹರೇಕಳ ಮತ್ತಿತರರು ಉಪಸ್ಥಿತರಿದ್ದರು.