ಮಂಗಳೂರು: ಮುಷ್ಕರ ನಿರತ 12 ಸಿಬ್ಬಂದಿ ಸೇವೆಯಿಂದ ವಜಾ

Update: 2021-04-15 16:02 GMT

ಮಂಗಳೂರು, ಎ.15: ರಾಜ್ಯ ಸರಕಾರದ ಆದೇಶ ಉಲ್ಲಂಘಿಸಿ ಮುಷ್ಕರ ನಿರತ ಮಂಗಳೂರು ವಿಭಾಗದ 12 ಕೆಎಸ್ಸಾರ್ಟಿಸಿ ನೌಕರರನ್ನು ಸೇವೆಯಿಂದ ವಜಾಗೊಳಿಸಲಾಗಿದ್ದು, 20ಕ್ಕೂ ಅಧಿಕ ಮಂದಿಗೆ ವರ್ಗಾವಣೆಯ ಶಿಕ್ಷೆ ನೀಡಲಾಗಿದೆ.

ಮುಷ್ಕರ ನಿರತ ನೌಕರರ ಮೇಲೆ ಸರಕಾರ ಕಠಿಣ ಕ್ರಮ ಜರುಗಿಸುತ್ತಲೇ ಇತರ ನೌಕರರು ಮುಷ್ಕರ ಕೈ ಬಿಟ್ಟು ಕೆಲಸಕ್ಕೆ ಹಾಜರಾಗುತ್ತಿದ್ದಾರೆ ಎಂದು ತಿಳಿದು ಬಂದಿದೆ. ಅದರಂತೆ ಗುರುವಾರ ಮಂಗಳೂರು ವಿಭಾಗದಲ್ಲಿ ಶೇ.75 ರಷ್ಟು ಬಸ್‌ಗಳು ಸಂಚಾರ ನಡೆಸಿವೆ ಮತ್ತು ನೌಕರರೂ ಕರ್ತವ್ಯಕ್ಕೆ ಹಾಜರಾಗುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News