ಉಡುಪಿ: ಬೀಡಿ ಕಾಂಟ್ರಾಕ್ಟ್ ದಾರರಿಗೆ ಕಮಿಷನ್ ಹೆಚ್ಚಳ

Update: 2021-04-17 17:36 GMT

ಉಡುಪಿ: ಮೈಸೂರಿನ ಗಣೇಶ ಬೀಡಿಯ ಮಾಲಕರು ಮತ್ತು ಉಡುಪಿ ಜಿಲ್ಲಾ ಕಂಟ್ರ್ಯಾಕ್ಟುದಾರರ ಸಂಘ, ಕರಾವಳಿ ಜಿಲ್ಲಾ ಬೀಡಿ ಕಂಟ್ರ್ಯಾಕ್ಟುದಾರರ ಸಂಘದ ನಾಯಕರು ನಡೆಸಿದ ಮಾತುಕತೆಯಲ್ಲಿ 2020-21 ಕಮಿಷನ್ 2.25 ರೂ. ಹೆಚ್ಚಳ ಮಾಡಿರುವುದಾಗಿ ಘೋಷಿಸಲಾಯಿತು..

ಹೆಚ್ಚಳವಾಗುವ ಕಮಿಷನನ್ನು ಜುಲೈ ತಿಂಗಳಲ್ಲಿ ಇತ್ಯರ್ಥ ಪಡಿಸುತ್ತೇನೆ ಎಂದು ಭರವಸೆಯನ್ನು ನೀಡಿರುತ್ತಾರೆ. 

ಬಾಕಿ ಇರುವ ಮೊತ್ತವನ್ನು 2-3 ತಿಂಗಳಲ್ಲಿ ನೀಡುತ್ತೇವೆ ಎಂಬ ಭರವಸೆಯನ್ನು ನೀಡಿರುತ್ತಾರೆ ಎಂದು  ಕರ್ನಾಟಕ ಬೀಡಿ ಮಾಲಕರ ಸಂಘದ ಅಧ್ಯಕ್ಷ ಜಗನ್ನಾಧ್  ಶೆಟ್ಟಿ ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ರವಿ ಉಡುಪಿ, ಕೃಷ್ಣ ರೈ, ಗಂಗಾಧರ ರೈ, ಖಾದರ್ ಕಿನ್ನಿಗೋಳಿ, ಖಾದರ್ ಸುರತ್ಕಲ್, ವೀರಪ್ಪ ಕುದ್ರೋಳಿ ಮತ್ತು ರಾಧಾಕೃಷ್ಣ ಸರಪಾಡಿ ಇವರು ಭಾಗವಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News