ದ.ಕ. ಮರಾಟಿ ಸಂರಕ್ಷಣಾ ಸಮಿತಿಯ ಮಂಗಳೂರು ಘಟಕದ ನೂತನ ಅಧ್ಯಕ್ಷರಾಗಿ ಸಂದೀಪ್ ನಾಯ್ಕ ಆಯ್ಕೆ

Update: 2021-04-18 12:20 GMT

ಮಂಗಳೂರು, ಎ. 18: ದ.ಕ. ಮರಾಟಿ ಸಂರಕ್ಷಣಾ ಸಮಿತಿಯ ಮಂಗಳೂರು ಘಟಕದ ನೂತನ ಅಧ್ಯಕ್ಷರಾಗಿ ಸಂದೀಪ್ ನಾಯ್ಕ ಆಯ್ಕೆಯಾಗಿದ್ದಾರೆ.

ಸಂಚಾಲಕ ಉದಯ ನಾಯ್ಕಾ, ಉಪಾಧ್ಯಕ್ಷ ಕುಶಾಲಪ್ಪನಾಯ್ಕ, ಪ್ರಧಾನ ಕಾರ್ಯದರ್ಶಿ ಚಂದ್ರಾವತಿ, ಜತೆ ಕಾರ್ಯದರ್ಶಿ ನಾಗೇಶ್, ಕೋಶಾಧಿಕಾರಿ ಬಾಲಕೃಷ್ಣ ನಾಯ್ಕ, ಕ್ರೀಡಾ ಹಾಗೂ ಸಾಂಸ್ಕೃತಿಕ ಕಾರ್ಯದರ್ಶಿ ರಾಜ್ ಕುಮಾರ್, ಪ್ರಚಾರ ಸಂಚಾಲಕ ಹರೀಶ್ ಮೋಟುಕಾನ, ಮರಾಟಿ ಸಂವಾದ, ನೆರವು ಆನಂದ ನಾಯ್ಕ, ಮರಾಟಿ ರಕ್ತನಿಧಿ, ಉದ್ಯೋಗ ವೀಣಾಲತಾ, ಸ್ವಚ್ಛತೆ, ಪ್ರವಾಸ ಮಂಜುನಾಥ್, ವೈದ್ಯಕೀಯ ನೆರವು ವಸಂತಿ, ಶಿಕ್ಷಣ ಕೆ.ಬಾಬು ನಾಯ್ಕ, ಸಂಘಟನಾ ಕಾರ್ಯದರ್ಶಿ ದೇವಣ್ಣ ನಾಯ್ಕ ಆಯ್ಕೆಯಾದರು.ರವಿವಾರ ನಗರ ಹೊಟೇಲೊಂದರಲ್ಲಿ ನಡೆದ ಸಭೆಯಲ್ಲಿ ಸಮಿತಿಯ ಜಿಲ್ಲಾ ಸಂಚಾಲಕ ಶ್ರೀಧರ ನಾಯ್ಕ ಮುಂಡೋವುಮೂಲೆ ಹಾಗೂ ಅಧ್ಯಕ್ಷ ಅಶೋಕ್ ನಾಯ್ಕ ಕೆದಿಲ ಚುನಾವಣಾ ಪ್ರಕ್ರಿಯೆ ನಡೆಸಿ ಕೊಟ್ಟರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News