ಸಂಸದ ನಳಿನ್ ಕುಮಾರ್ ಕಚೇರಿ ಕೊರೋನಾ ಸಹಾಯವಾಣಿ ಕೇಂದ್ರ

Update: 2021-04-19 11:08 GMT

ಮಂಗಳೂರು, ಎ.19: ಜಿಲ್ಲೆಯಲ್ಲಿ ಕೊರೋನ ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಸಂಸದ ನಳಿನ್ ಕುಮಾರ್ ಕಟೀಲ್ ರವರು ತನ್ನ ಕಚೇರಿಯನ್ನು ಜಿಲ್ಲೆಯ ಕೊರೋನಾ ಸಹಾಯವಾಣಿ ಕೇಂದ್ರವನ್ನಾಗಿ ಘೋಷಣೆ ಮಾಡಿದ್ದಾರೆ.

 ಸಂಸದರ ಉಪಸ್ಥಿತಿಯಲ್ಲಿ ಪ್ರಮುಖರ ಸಭೆ ಕರೆದು ಕೊರೋನ ಸಹಾಯವಾಣಿ ಕೇಂದ್ರದ ನಿರ್ವಹಣೆಗಾಗಿ ಸಮಿತಿಯನ್ನು ರಚಿಸಲಾಗಿದೆ. ತುರ್ತು ಸೇವೆಗಾಗಿ ಜಿಲ್ಲೆಯ ಜನತೆ ಸಮಿತಿಯ ಪ್ರಮುಖರನ್ನು ಸಂಪರ್ಕಿಸಬೇಕಾಗಿ ಜಿಲ್ಲಾಧ್ಯಕ್ಷರಾದ ಸುದರ್ಶನ ಎಂ ಮನವಿ ಮಾಡಿದ್ದಾರೆ.  ಸಮಿತಿಯ ಮೇಲ್ವಿಚಾರಕರಾಗಿ ಶಾಸಕ ಡಿ ವೇದವ್ಯಾಸ ಕಾಮತ್ ಕಾರ್ಯ ನಿರ್ವಹಿಸಲಿದ್ದಾರೆ ಎಂದು ಪ್ರಕಟನೆಯಲ್ಲಿ ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News