ಕುಡಿಯುವ ನೀರು ಪೂರೈಕೆಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ

Update: 2021-04-19 12:05 GMT

ಭಟ್ಕಳ: ಭಟ್ಕಳ ತಾಲೂಕಿನಲ್ಲಿ ಗ್ರಾಮೀಣ ಭಾಗ, ಮಜಿರೆಗಳಲ್ಲಿ ಕುಡಿಯುವ ನೀರು ಸರಬರಾಜು ಮಾಡುವ ಕುರಿತು ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದ್ದು ಅರ್ಜಿ ಫಾರಂಗಳನ್ನು ತಹಸೀಲ್ದಾರ್ ಕಚೇರಿಯಿಂದ ಪಡೆದು ಎಪ್ರಿಲ್ 23ರ ಒಳಗಾಗಿ ತಹಸೀಲ್ದಾರ್ ಕಚೇರಿಗೆ ತಲುಪಿಸುವಂತೆ ಪ್ರಕಟನೆಯಲ್ಲಿ ಕೋರಿದ್ದಾರೆ.

ಕುಡಿಯುವ ನೀರು ಪೂರೈಕೆ ಮಾಡುವ ಪೂರ್ವದಲ್ಲಿ ಟಾಸ್ಕ್ಫೋರ್ಸ್ ಕಮಿಟಿಯವರು ಸ್ಥಳ ತನಿಖೆ ಮಾಡಿ ನಿಗದಿ ಪಡಿಸಿದ ನೀರಿನ ಮೂಲದಿಂದಲೇ ನೀರು ಸರಬರಾಜು ಮಾಡಬೇಕಾಗಿದ್ದು, ನೀರು ತುಂಬುವ ಸ್ಥಳ ಮತ್ತು ಸರಬರಾಜು ಮಾಡುವ ಸ್ಥಳವನ್ನು ನಿರ್ಧರಿಸುವ ಅಧಿಕಾರ ಟಾಸ್ಕ್‌ಪೋರ್ಸ ಕಮಿಟಿಗೆ ಮಾತ್ರ ಇದ್ದು ನೀರು ಸರಬರಾಜು ಮಾಡುವವರು ಇದಕ್ಕೆ ಬದ್ಧರಾಗಿರಬೇಕು ಎಂದೂ ತಿಳಿಸಲಾಗಿದೆ.                                                          

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News