ಅಂಬಲಪಾಡಿಗೆ ಹೊಸ ನ್ಯಾಯಬೆಲೆ ಅಂಗಡಿ

Update: 2021-04-19 12:48 GMT

ಉಡುಪಿ, ಎ.19: ತಾಲೂಕಿನ ಅಂಬಲಪಾಡಿ ಗ್ರಾಪಂ ವತಿಯಿಂದ ಹೊಸದಾಗಿ ನ್ಯಾಯ ಬೆಲೆ ಅಂಗಡಿಯನ್ನು ಮಂಜೂರು ಮಾಡಲಾಗಿದ್ದು, ಈ ತಿಂಗಳಿನಿಂದಲೇ ಪಡಿತರದಾರರ ಕಾರ್ಡುಗಳಿಗೆ ಆಹಾರಧಾನ್ಯವನ್ನು ವಿತರಿಸಲಾಗುವುದು.

ಪಡಿತರದಾರರು ಸಂಬಂಧ ಪಟ್ಟ ವ್ಯಾಪ್ತಿಯ ನ್ಯಾಯಬೆಲೆ ಅಂಗಡಿಯಲ್ಲಿ ಪಡಿತರ ಆಹಾರಧಾನ್ಯ ಪಡೆಯಬಹುದು. ಈ ಹಿಂದೆ ಕೊಡವೂರು ವಿಎಸ್‌ಎಸ್‌ಎನ್ ಕಡೆಕಾರು ಶಾಖೆಯಲ್ಲಿ ಪಡಿತರ ಧಾನ್ಯ ಪಡೆಯುತಿದ್ದ ಒಟ್ಟು 974 ಪಡಿತರ ಚೀಟಿಯವರು ಇನ್ನು ಅಂಬಲಪಾಡಿ ಗ್ರಾಪಂ ಕಾರ್ಯಾಲಯದಿಂದ ಪಡಿತರವನ್ನು ಪಡೆಯಬಹುದು.

ಈ ನ್ಯಾಯಬೆಲೆ ಅಂಗಡಿ ವ್ಯಾಪ್ತಿಗೆ ಸಂಪೂರ್ಣ ಅಂಬಲಪಾಡಿ ಗ್ರಾಮ, ಪಂದುಬೆಟ್ಟು, ಕಡೆಕಾರು, ಕಿದಿಯೂರು ಹಾಗೂ ಮೂಡನಿಡಂಬೂರು ಗ್ರಾಮ ಭಾಗಶ: ಒಳಪಡಲಿದೆ ಎಂದು ಜಿಲ್ಲಾ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಉಪನಿರ್ದೇಶಕರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News