ಉಳ್ಳಾಲ: ಸಿಡಿಲು ಬಡಿದು ಮನೆಗೆ ಹಾನಿ

Update: 2021-04-19 14:37 GMT

ಉಳ್ಳಾಲ:  ನಿನ್ನೆ ರಾತ್ರಿ ಸುರಿದ ಸಿಡಿಲು ಮಿಂಚಿನ ಮಳೆಗೆ ತೊಕ್ಕೊಟ್ಟು ಕೆರೆಬೈಲಿನ ಮನೆಯೊಂದಕ್ಕೆ ಸಿಡಿಲು ಬಡಿದು  ಹಾನಿಯಾದ ಬಗ್ಗೆ ವರದಿ ಯಾಗಿದೆ. ಮನೆಯ ಎದುರಿನ ತೆಂಗಿನ ಮರಕ್ಕೆ ಸಿಡಿಲಿನ ಆಘಾತಕ್ಕೆ ಬೆಂಕಿ ಹತ್ತಿಕೊಂಡು ಸುಟ್ಟು ಹೋಗಿದೆ. 

ರಾಜ ಕಾಮತ್ ಎಂಬವರ ತಾರಸಿ ಮನೆಗೆ ಸಿಡಿಲು ಬಡಿದಿದ್ದು, ಗೋಡೆ ಬಿರುಕು ಬಿಟ್ಟಿದೆ. ಘಟನೆಯ ಸಂದರ್ಭ ರಾಜ ಕಾಮತ್, ಅವರ ಅಕ್ಕ, ಪತ್ನಿ, ಮಗಳು ಮನೆಯಲ್ಲಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಮನೆಯ ಇಲೆಕ್ಟ್ರಾನಿಕ್ ಸಾಮಗ್ರಿಗಳು ಕೆಟ್ಟು ಹೋಗಿ ಅಪಾರ ನಷ್ಟ ಸಂಭವಿಸಿದೆ. 

ಸ್ಥಳೀಯ ನಗರಸಭಾ ಸದಸ್ಯ ರಾಜೇಶ್ ಯು.ಬಿ, ಫೆರ್ಮನ್ನೂರು ಗ್ರಾಮಕರಣಿಕ ಶ್ವೇತಾ  ಅವರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News