ನದಿಯಲ್ಲಿ ತೇಲಿ ಬಂದ ಮೃತದೇಹದ ಗುರುತು ಪತ್ತೆಗೆ ಮನವಿ

Update: 2021-04-19 17:19 GMT

ಮಂಗಳೂರು, ಎ.19: ನಗರದ ಬಂದರ್ ದಕ್ಕೆಯ ಬಳಿ ಎ.19ರಂದು ಸಂಜೆ 4:30ಕ್ಕೆ ಸುಮಾರು 45ರಿಂದ 55 ವರ್ಷ ಪ್ರಾಯದೊಳಗಿನ ಅಪರಿಚಿತ ವ್ಯಕ್ತಿಯ ಮೃತದೇಹವು ನದಿಯಲ್ಲಿ ಕಂಡು ಬಂದಿದೆ.

ದಕ್ಕೆಯಲ್ಲೇ ಇದ್ದ ಜನರು ಈ ಮೃತದೇಹವನ್ನು ದಡಕ್ಕೆ ತಂದು ಪಾಂಡೇಶ್ವರ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಹಾಗೇ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಿ ಪರೀಕ್ಷಿಸಿದಾಗ ಅಪರಿಚಿತ ವ್ಯಕ್ತಿಯು ಸಾವಿಗೀಡಾಗಿರುವುದನ್ನು ವೈದ್ಯರು ಘೋಷಿಸಿದ್ದಾರೆ. ಅನಾರೋಗ್ಯ ಅಥವಾ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು ಮೃತಪಟ್ಟಿರುವುದಾಗಿ ಸಂಶಯಿಸಲಾಗಿದೆ. 5.6 ಅಡಿ ಎತ್ತರದ, ಸಾಧಾರಣ ಶರೀರದ ಈ ವ್ಯಕ್ತಿಯು ಗೋದಿ ಮೈಬಣ್ಣ ಹೊಂದಿದ್ದಾರೆ. ವಾರಸುದಾರರಿದ್ದಲ್ಲಿ ಪಾಂಡೇಶ್ವರ ಪೊಲೀಸರನ್ನು ಸಂಪರ್ಕಿಸಬಹುದಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News