ಕರಾವಳಿ ಸಂಗೀತ ಕಲಾವಿದರ ಒಕ್ಕೂಟದಿಂದ ಡಿಸಿಗೆ ಮನವಿ

Update: 2021-04-20 18:12 GMT

ಉಡುಪಿ, ಎ.20: ರಾತ್ರಿ ಕರ್ಫ್ಯೂನಿಂದಾಗಿ ಆರ್ಕೆಸ್ಟ್ರಾ ಕಲಾವಿದರು ರಾತ್ರಿ ಕಾರ್ಯಕ್ರಮ ಮುಗಿಸಿ ಬರುವಾಗ ತೊಂದರೆಗಳು ಆಗುತ್ತಿದ್ದು, ಈಗಾಗಲೇ ವಹಿಸಿಕೊಂಡ ಸಂಗೀತ ಕಾರ್ಯಕ್ರಮಗಳು ರದ್ದಾಗಿ ಕುಟುಂಬ ನಿರ್ವಹಣೆ ಕಷ್ಟವಾಗುತ್ತಿದೆ ಎಂದು ಆರೋಪಿಸಿ ಕರಾವಳಿ ಸಂಗೀತ ಕಲಾವಿದರ ಒಕ್ಕೂಟ ಉಡುಪಿ ಜಿಲ್ಲೆ ವತಿಯಿಂದ ಸೋಮವಾರ ಉಡುಪಿ ಜಿಲ್ಲಾಧಿಕಾರಿ ಜಿ. ಜಗದೀಶ್ ಅವರಿಗೆ ಮನವಿ ಸಲ್ಲಿಸಲಾಯಿತು.

ಕೊರೋನಾದಿಂದಾಗಿ ಅದೆಷ್ಟೋ ಪೂರ್ವ ನಿಗದಿತ ಕಾರ್ಯಕ್ರಮಗಳು ರದ್ಧಾ ಗಿದ್ದು, ನಾವೆಲ್ಲ ತುಂಬ ಆರ್ಥಿಕ ಸಂಕಷ್ಟದಲ್ಲಿದ್ದೇವೆ. ಕಳೆದ ವರುಷದ ಸೀಸನ್ ಸಮಯದಲ್ಲಿ ಮತ್ತು ಈ ವರುಷದಲ್ಲೂ ಇದೇ ಪರಿಸ್ಥಿತಿ ಮುಂದುವರೆದಿದ್ದು ನಮಗೆಲ್ಲ ತುಂಬ ಆತಂಕ ಉಂಟಾಗಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.

ಈ ಸಂಧರ್ಭದಲ್ಲಿ ಸಂಗೀತ ಕಲಾವಿದರ ಉಡುಪಿ ವಲಯಾಧ್ಯಕ್ಷೆ ಮುಕ್ತಾ ಶ್ರೀನಿವಾಸ್ ಭಟ್, ಸಂತೋಷ್ ಪಾನಾ, ಪ್ರಜ್ವಲ್ ಆಚಾರ್ಯ, ಶರತ್ ಉಚ್ಚಿಲ, ವಾಮನ ಕುಮಾರ್, ಅರುಣ್, ರೋಹಿತ್ ಮಲ್ಪೆಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News