ಹಲ್ಲೆ ಪ್ರಕರಣ : ನಟ ವಿನೋದ್ ಆಳ್ವ ಗೆ ಮಧ್ಯಂತರ ಜಾಮೀನು
Update: 2021-04-21 14:08 GMT
ಪುತ್ತೂರು : ಚಿತ್ರ ನಟ ವಿನೋದ್ ಆಳ್ವ ಸಹಿತ ಇಬ್ಬರ ವಿರುದ್ಧ ಸಂಪ್ಯ ಪೊಲೀಸ್ ಠಾಣೆಯಲ್ಲಿ ದಾಖಲಾದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿ ಬಂಧಿತನಾಗಿದ್ದ ವಿನೋದ್ ಆಳ್ವಗೆ ನ್ಯಾಯಾಲಯ ಮಧ್ಯಂತರ ಜಾಮೀನು ನೀಡಿದೆ.
ವಿನೋದ್ ಆಳ್ವ ಹಾಗು ಅವರ ಜೊತೆಗಿದ್ದವರು ಹಲ್ಲೆ ಮಾಡಿರುವುದಾಗಿ ಪುತ್ತೂರು ತಾಲೂಕಿನ ಪಡುವನ್ನೂರು ಗ್ರಾಮದ ಉದಯ ಎಂಬವರು ದೂರು ನೀಡಿದ್ದರು.