ಹೊಳೆಯಲ್ಲಿ ಮುಳುಗಿ ಯುವಕ ಮೃತ್ಯು

Update: 2021-04-21 16:47 GMT

ಹೆಬ್ರಿ, ಎ. 21: ಜರ್ವತ್ತು ಹೊಳೆಗೆ ಸ್ನಾನ ಮಾಡಲು ಹೋದ ವ್ಯಕ್ತಿಯೊಬ್ಬರು ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಎ.21ರಂದು ಬೆಳಗ್ಗೆ ನಡೆದಿದೆ.

ಹೆಬ್ರಿ ಗ್ರಾಮದ ಬೊಳಂಗಲ್ ನಿವಾಸಿ ಸುಬ್ಬಣ್ಣ ನಾಯಕ್ ಎಂಬವರ ಮಗ ಕೃಷ್ಣಮೂರ್ತಿ(30) ಎಂದು ಗುರುತಿಸಲಾಗಿದೆ. ಉಡುಪಿಯ ಬಟ್ಟೆ ಅಂಗಡಿ ಯಲ್ಲಿ ಸೇಲ್ಸ್ಮೆನ್ ಆಗಿ ಕೆಲಸ ಮಾಡಿಕೊಂಡಿದ್ದ ಇವರು, ಎ.20ರಂದು ಮನೆಗೆ ಬಂದಿದ್ದು, ಮರುದಿನ ಬೆಳಗ್ಗೆ ಮನೆಯ ಬಳಿಯ ಹೊಳೆಗೆ ಸ್ನಾನಕ್ಕೆ ತೆರಳಿದ್ದರು. ಈ ವೇಳೆ ಅವರು ಅಕಸ್ಮಿಕವಾಗಿ ನೀರಿನಲ್ಲಿ ಮುಳುಗಿ ಮೃತಪಟ್ಟರು. ಈ ಬಗ್ಗೆ ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News