ಪಡುಬಿದ್ರಿ: ಅಂಬೇಡ್ಕರ್ ಯುವ ಸೇನೆಯಿಂದ ನೆರವಿನ ಹಸ್ತ

Update: 2021-04-22 09:31 GMT

ಪಡುಬಿದ್ರಿ: ಅಂಬೇಡ್ಕರ್ ಯುವ ಸೇನೆ ಕಾಪು ತಾಲೂಕು ಶಾಖೆ ಉಡುಪಿ ಇದರ ವತಿಯಿಂದ ಇತ್ತೀಚೆಗೆ ಅನಾರೋಗ್ಯ ಪೀಡಿತರಿಗೆ ನೆರವಿನ ಹಸ್ತ ನೀಡಿದೆ.

ಇತ್ತೀಚೆಗೆ ಪಡುಬಿದ್ರಿಯ ಬೋರ್ಡು ಶಾಲಾ ಮೈದಾನದಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಸಮಾಜದವರಿಗೆ ನಡೆಸಿದ ಕ್ರಿಕೆಟ್ ಪಂದ್ಯಾಟದಲ್ಲಿ ಉಳಿಕೆ ಹಣವನ್ನು ಸಮಾಜದ ಅನಾರೋಗ್ಯ ಪೀಡಿತರಾದ ಜಯ ಪಾತ್ರಿ ಕಂಚಿನಡ್ಕ, ರಮಣಿ ಹೆಜಮಾಡಿ, ನಾರಾಯಣ ಪಣಿಯೂರು, ಶಿವ ಪಲಿಮಾರು ಇನ್ನಾ ಇವರ ಮನೆಗಳಿಗೆ ತೆರಳಿ ಸಹಾಯಧನ ಹಸ್ತಾಂತರಿಸಲಾಯಿತು. 

ಈ ಸಂದರ್ಭದಲ್ಲಿ ಅಂಬೇಡ್ಕರ್ ಯುವ ಸೇನೆಯ ಅಧ್ಯಕ್ಷ ಲೋಕೇಶ್ ಪಡುಬಿದ್ರಿ, ಗೌರವಾಧ್ಯಕ್ಷ  ಪಿ. ಕೃಷ್ಣ ಬಂಗೇರ ಸಹಾಯಧನವನ್ನು ವಿತರಿಸಿದರು.

ಕಾಪು ತಾಲೂಕು ಕಾರ್ಯದರ್ಶಿ ವಸಂತ ಪಾದಬೆಟ್ಟು, ಪಡುಬಿದ್ರಿ ಗ್ರಾಮ ಶಾಖೆ ಅಧ್ಯಕ್ಷ ಮನೋಹರ್ ಬೊಗ್ಗರ್ ಲಚ್ಚಿಲ್, ಕಾಪು ತಾಲೂಕು ಘಟಕದ ಉಪಾಧ್ಯಕ್ಷ ಪ್ರವೀಣ್ ನಂದಿಕೂರು, ಸಕ್ರಿಯ ಕಾರ್ಯಕರ್ತ ರಾಕೇಶ್ ಪಡುಬಿದ್ರಿ, ಸುಕುಮಾರ ಹೆಜಮಾಡಿ ಉಪಸ್ಥಿತರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News