ಮಣಿಪಾಲ ಕೆಎಂಸಿ: ಶನಿವಾರ ಹೊರರೋಗಿ ಸೇವೆ ಅಪರಾಹ್ನ 1 ರವರೆಗೆ ಮಾತ್ರ

Update: 2021-04-22 13:08 GMT

ಉಡುಪಿ, ಎ.22: ಕೊರೋನ ನಿಯಂತ್ರಣದ ಸಲುವಾಗಿ ರಾಜ್ಯ ಸರಕಾರ ವಿಧಿಸಿರುವ ವಾರಾಂತ್ಯ ಕರ್ಫ್ಯೂ ಆದೇಶದ ಹಿನ್ನೆಲೆಯಲ್ಲಿ ಎ.24ರಿಂದ ಜಾರಿಗೆ ಬರುವಂತೆ ಎಲ್ಲಾ ಶನಿವಾರಗಳಂದು ಹೊರರೋಗಿ ವಿಭಾಗದ ಸೇವೆಗಳು ಬೆಳಗ್ಗೆ 9 ರಿಂದ ಅಪರಾಹ್ನ 1 ರವರೆಗೆ ಮಾತ್ರ ಲಭ್ಯವಿರುತ್ತದೆ. ಇದು ಸರಕಾರದ ಆದೇಶ ಜಾರಿಯಲ್ಲಿರುವವರೆಗೆ ಮುಂದುವರಿಯುತ್ತದೆ ಎಂದು ಕೆಎಂಸಿ ಮಣಿಪಾಲದ ವೈದ್ಯಕೀಯ ಅಧೀಕ್ಷಕ ಡಾ. ಅವಿನಾಶ ಶೆಟ್ಟಿ ತಿಳಿಸಿದ್ದಾರೆ.

ಉಳಿದಂತೆ ಇತರ ಎಲ್ಲಾ ಕೆಲಸದ ದಿನಗಳಲ್ಲಿ ಹೊರರೋಗಿ ಸೇವೆಗಳು ಮೊದಲಿನಂತೆ ಬೆಳಗ್ಗೆ 8 ರಿಂದ ಸಂಜೆ 4 ರವರೆಗೆ ಕಾರ್ಯನಿರ್ವಹಿಸಲಿವೆ. ತುರ್ತು ಸೇವೆಗಳು ಎಂದಿನಂತೆ ಎಲ್ಲಾ ದಿನಗಳಲ್ಲಿ ದಿನದ 24 ಗಂಟೆಯೂ ಲಭ್ಯವಿರುತ್ತದೆ ಎಂದವರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News