ದೋಣಿ ಮಗುಚಿ ಯುವಕ ಮೃತ್ಯು

Update: 2021-04-22 15:18 GMT

ಗಂಗೊಳ್ಳಿ, ಎ. 22: ಸೌಪರ್ಣಿಕ ಹೊಳೆಯಲ್ಲಿ ದೋಣಿಯಲ್ಲಿ ಸಾಗುತಿದ್ದ ಯುವಕನೊಬ್ಬ ಅಕಸ್ಮಿಕವಾಗಿ ದೋಣಿ ಮಗುಚಿ ಬಿದ್ದು ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಗಂಗೊಳ್ಳಿಯಿಂದ ವರದಿಯಾಗಿದೆ.

ಮೃತರನ್ನು ಮರವಂತೆ ನಡುಬೆಟ್ಟುವಿನ ಕೆನ್ಯೂಟ್ ಗೊನ್ಸಾಲಿಸ್ ಎಂಬವರ ಮಗನಾದ ವಿಜಯ (45) ಎಂದು ಗುರುತಿಸಲಾ ಗಿದೆ. ವಿಜಯ ತನ್ನ ಸ್ವಂತ ದೋಣಿಯಲ್ಲಿ ತಂದೆ-ತಾಯಿಯೊಂದಿಗೆ ಮರವಂತೆಯಿಂದ ತಂಗಿಯ ಮನೆಯಾದ ನಾಡಾಕ್ಕೆ ಹೋಗಿದ್ದು, 2 ಗಂಟೆಗೆ ತಾನೊಬ್ಬನೇ ಮರಳಿ ಮನೆಗೆ ಹೊರಟಿದ್ದರು.

ಅಪರಾಹ್ನ 2 ಗಂಟೆ ಸುಮಾರಿಗೆ ಮನೆಗೆ ಮರಳಲು ಹೆಂಡತಿಯೊಂದಿಗೆ ಹೊಳೆ ತೀರಕ್ಕೆ ಬಂದ ಕೆನ್ಯೂಟ್‌ಗೆ ಹೊಳೆ ಬದಿಯಲ್ಲಿ ವಿಜಯನ ದೋಣಿ ಹಾಗೂ ಜಲ್ಲು ನೀರಿನಲ್ಲಿ ತೇಲುತ್ತಿರುವುದು ಕಂಡುಬಂತು. ಮನೆಗೆ ಬಂದು ವಿಜಯನ ಹೆಂಡತಿ ಬಳಿ ವಿಚಾರಿಸಿದಾಗ ವಿಜಯ ಮನೆಗೆ ಮರಳದಿರುವುದು ಗೊತ್ತಾಯಿತು. ಬಳಿಕ ನೆರೆಕೆರೆಯವರೊಂದಿಗೆ ಹುಡುಕಿದಾಗ ಕೋಟೆಮನೆ ದೋಣಿ ಕಡುವಿನಲ್ಲಿ ವಿಜಯರ ಮೃತದೇಹ ಪತ್ತೆಯಾಯಿತು.

ಈ ಬಗ್ಗೆ ಗಂಗೊಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News