ಕುಂತೂರು: ಎಸ್.ವೈ.ಎಸ್, ಎಸ್ಸೆಸ್ಸೆಫ್ ವತಿಯಿಂದ ಅನುಸ್ಮರಣೆ, ರಮಝಾನ್ ಕಿಟ್ ವಿತರಣೆ

Update: 2021-04-22 16:54 GMT

ಕುಂತೂರು,ಎ.21: ಕರ್ನಾಟಕ ರಾಜ್ಯ ಸುನ್ನೀ ಯುವ ಜನ ಸಂಘ (ಎಸ್.ವೈ.ಎಸ್) ಕುಂತೂರು ಬ್ರಾಂಚ್ ಹಾಗೂ ಸುನ್ನೀ ಸ್ಟೂಡೆಂಟ್ಸ್ ಫೆಡರೇಶನ್ ಎಸ್ಸೆಸ್ಸೆಫ್ ಕುಂತೂರು ಯುನಿಟ್ ವತಿಯಿಂದ ಮಾಸಿಕ ಮಹ್ಳರತುಲ್ ಬದ್ರಿಯಾ ಮಜ್ಲಿಸ್-ತಾಜುಶ್ಶರೀಅಃ ಅಲಿ ಕುಂಞಿ ಉಸ್ತಾದ್ ಅನುಸ್ಮರಣೆ ಮತ್ತು ರಂಝಾನ್ ಕಿಟ್ ವಿತರಣೆ ಕಾರ್ಯಕ್ರಮ ಎಸ್.ವೈ.ಎಸ್ ಕುಂತೂರು ಬ್ರಾಂಚ್ ಅಧ್ಯಕ್ಷ ಹಂಝ ಸಅದಿ ರವರ ಅಧ್ಯಕ್ಷತೆಯಲ್ಲಿ ನಡೆಯಿತು.

ಎಸ್ಸೆಸ್ಸೆಫ್ ಕುಂತೂರು ಯುನಿಟ್ ಅಧ್ಯಕ್ಷ ಹನೀಫ್ ಝೈನಿ ಕಾರ್ಯಕ್ರಮವನ್ನು ಉಧ್ಘಾಟಿಸಿದರು. ಎಸ್ಸೆಸ್ಸೆಫ್ ಸದಸ್ಯತ್ವ ಪಡೆದವರಿಗೆ ಕಾರ್ಯಕ್ರಮದಲ್ಲಿ  ಎಸ್ಸೆಸ್ಸೆಫ್ ಐಡಿ ವಿತರಣೆ ಮಾಡಲಾಯಿತು ಹಾಗೂ ಕುಂತೂರು ಯುನಿಟ್ ವ್ಯಾಪ್ತಿಯ ಸುಮಾರು 45 ಅತೀ ಕಡು ಬಡವ, ವಿಧವೆ, ಯತೀಂ ಕುಟುಂಬಗಳಿಗೆ ರಂಝಾನ್ ಕಿಟ್ ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ಎಸ್.ವೈ.ಎಸ್ ಉಪಾಧ್ಯಕ್ಷ ಅಝೀಝ್ ಮುಸ್ಲಿಯಾರ್, ಕೋಶಾಧಿಕಾರಿ ಕೆ.ಆರ್ ಹಮೀದ್, ಸದಸ್ಯರಾದ ಅಬ್ದುಲ್ ಹಮೀದ್ ಮುಸ್ಲಿಯಾರ್, ಉಂಞಿ ಉಸ್ತಾದ್ ಯು.ಕೆ ಇಸ್ಮಾಯಿಲ್, ಅಬ್ದುಲ್ ರಝಾಕ್, ಅಬ್ದುಲ್ ಲತೀಫ್ ಸುರುಳಿ, ಆಸೀಫ್ ಬೇಳ್ಪಾಡಿ ಹಾಗೂ ಎಸ್ಸೆಸ್ಸೆಫ್ ಕೋಶಾಧಿಕಾರಿ ಸಾಬಿತ್ ಕೆ.ಆರ್, ತೌಜೀದ್ ಯುಕೆ, ಹುದೈಫ್ ಕುಂತೂರು ಮತ್ತು ಸದಸ್ಯರು ಉಪಸ್ಥಿತರಿದ್ದರು.

ಅಬ್ದುರ್ರಝಾಖ್ ಲತೀಫಿ ಕುಂತೂರು ಸ್ವಾಗತಿಸಿ, ಉನೈಸ್ ಅಹ್ಮದ್ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News