×
Ad

ಕಾಸರಗೋಡು : ಎ.24, 25ರಂದು ತುರ್ತು ಸೇವೆಗಳಿಗೆ ಮಾತ್ರ ಅನುಮತಿ

Update: 2021-04-23 21:47 IST

ಕಾಸರಗೋಡು : ಕೋವಿಡ್ ಸೋಂಕು ನಿಯಂತ್ರಣದ ಹಿನ್ನಲೆಯಲ್ಲಿ ಎ.24, 25ರಂದು ತುರ್ತು ಸೇವೆಗಳಿಗೆ  ಮಾತ್ರ ಅನುಮತಿ ನೀಡಿ ರಾಜ್ಯ ಮುಖ್ಯ ಕಾರ್ಯದರ್ಶಿ ಯವರು ಮಾರ್ಗ ಸೂಚಿ ಹೊರಡಿಸಿದ್ದಾರೆ.

ಎ.24ರಂದು ಸರಕಾರಿ  ಬಸ್ಸು , ಬ್ಯಾಂಕ್ , ಸಾರ್ವಜನಿಕ ಸಂಸ್ಥೆಗಳು , ಸಹಕಾರಿ ಸಂಸ್ಥೆಗಳು ಮೊದಲಾದವುಗಳಿಗೆ ರಜೆ ನೀಡಲಾಗಿದೆ. ವಿವಾಹ ಇನ್ನಿತರ ಶುಭ ಸಮಾರಂಭಗಳನ್ನು ಕೋವಿಡ್  ಜಾಗ್ರತಾ  ಪೋರ್ಟಲ್ ನಲ್ಲಿ  ನೋಂದಾಯಿಸಬೇಕು. ನೋಂದಾಯಿಸಿದವರಿಗೆ ಮಾತ್ರ ವಿವಾಹ ಹಾಗೂ ಶುಭ ಸಮಾರಂಭ ಗಳಿಗೆ ಅನುಮತಿ ನೀಡಲಾಗುವುದು.

1. ಕೋವಿಡ್ ನಿಯಂತ್ರಣಕ್ಕೆ   ಸಂಬಂಧಪಟ್ಟ    ಕೇಂದ್ರ -ರಾಜ್ಯ ಸರಕಾರಿ  ಕಚೇರಿಗಳು , ಸ್ಥಳೀಯಾಡಳಿತ ಸಂಸ್ಥೆಗಳು  ತೆರೆದು ಕಾರ್ಯಾಚರಿಸಲಿದೆ.

2. ಟೆಲಿಕಾಂ , ಇಂಟರ್ ನೆಟ್ ಸೇವೆಗಳ ಸಿಬಂದಿ ಹಾಗೂ ವಾಹನಗಳಿಗೆ ಸಂಸ್ಥೆಯ ಗುರುತು ಚೀಟಿ ತೋರಿಸಿದ್ದಲ್ಲಿ  ಪ್ರಯಾಣಕ್ಕೆ ಅನುಮತಿ ನೀಡಲಾಗುವುದು .
3. ತುರ್ತು ಚಿಕಿತ್ಸೆಗೆ ತೆರಳುವ ರೋಗಿಗಳು ಹಾಗೂ ಸಹಾಯಕರು , ಸಂಬಂಧಿಕರು ದಾಖಲಾತಿ ಪತ್ರಗಳನ್ನು ತೋರಿಸಿದರೆ  ಪ್ರಯಾಣಕ್ಕೆ ಅನುಮತಿ ನೀಡಲಾಗುವುದು .
4.     ವ್ಯಾಕ್ಸಿನೇಷನ್   ಪಡೆಯುವವರು  ಯುವುದಾದರೂ ಗುರುತು   ಚೀಟಿ ತೋರಿಸಿದರೆ ಪ್ರಯಾಣಕ್ಕೆ ಅನುಮತಿ
5. ಆಹಾರ ವಸ್ತು , ಹಣ್ಣು , ತರಕಾರಿ  , ಹಾಲು , ಮಾಂಸ , ಮೀನು   ಇತ್ಯಾದಿ ಮಾರಾಟ ಅಂಗಡಿಗಳು ಮಾತ್ರ ತೆರೆಯಬಹುದು. ಹೋಂ ಡೆಲಿವರಿ ಗೆ ಒತ್ತುನೀಡಬೇಕು . ಇದರಿಂದ ಜನರು  ಹೆಚ್ಚಾಗಿ ಮನೆಯಿಂದ ಹೊರಬಾರದಂತೆ   ತಡೆಯಬೇಕು.

6. ಹೋಟೆಲ್ , ರೆಸ್ಟೋರೆಂಟ್ ಗಳಲ್ಲಿ ಹೋಂ ಡೆಲಿವರಿ ಹಾಗೂ  ಪಾರ್ಸೆಲ್ ಗೆ ಮಾತ್ರ  ಅನುಮತಿ ನೀಡಲಾಗುವುದು
7. ದೀರ್ಘದೂರದ ಬಸ್ಸುಗಳು , ರೈಲು , ಬಸ್ಸು , ವಿಮಾನ ನಿಲ್ದಾಣಗಳಲ್ಲಿ  ಪ್ರಯಾಣಿಕರನ್ನು ಕರೆದೊಯ್ಯಲು ಖಾಸಗಿ ವಾಹನಗಳಿಗೆ  ಅನುಮತಿ. ಪ್ರಯಾಣಿಕರು ಟಿಕೆಟ್  ಸೇರಿದಂತೆ  ಪ್ರಯಾಣ ದಾಖಲೆಗಳನ್ನು  ಇರಿಸಿಕೊಳ್ಳಬೇಕು .
8 . ಕೋವಿಡ್ ಜಾಗ್ರತಾ ಪೋರ್ಟಲ್ ನಲ್ಲಿ  ಮುಂಗಡ ನೋಂದಣಿ ಮಾಡಿದ ವಿವಾಹ , ಗ್ರಹಪ್ರವೇಶ ಹಾಗೂ ಇನ್ನಿತರ ಕಾರ್ಯಕ್ರಮಗಳಿಗೆ  ಅನುಮತಿ ನೀಡಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News