ಪ.ವರ್ಗದ ಅಭ್ಯರ್ಥಿಗಳಿಗೆ ಇ-ಕಾರ್ಟ್ : ಸೌಲಭ್ಯಕ್ಕಾಗಿ ಆಸಕ್ತರಿಂದ ಅರ್ಜಿ ಆಹ್ವಾನ
Update: 2021-04-24 20:07 IST
ಉಡುಪಿ, ಎ. 24: ಸಮಗ್ರ ಗಿರಿಜನ ಯೋಜನೆಯಡಿಯಲ್ಲಿ ಇ-ಕಾರ್ಟ್ ಸೌಲಭ್ಯ ಪಡೆಯಲು ಜಿಲ್ಲೆಯ ನಗರಸಭೆ, ಪುರಸಭೆ, ಪಟ್ಟಣ ಪಂಚಾಯತ್ ವ್ಯಾಪ್ತಿಗೆ ಒಳಪಡುವ ಪರಿಶಿಷ್ಟ ವರ್ಗದ ನಿರುದ್ಯೋಗಿ ಯುವಕ/ಯುವತಿಯರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಆಸಕ್ತರು ಎ.30ರೊಳಗೆ ಜಿಲ್ಲಾ ಸನಮನ್ವಯ ಯೋಜನಾಧಿಕಾರಿ, ಸಮಗ್ರ ಗಿರಿಜನ ಯೋಜನೆ, ರಜತಾದ್ರಿ ಮಣಿಪಾಲ ಹಾಗೂ ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕರು ಉಡುಪಿ, ಕುಂದಾಪುರ, ಕಾರ್ಕಳ ಇಲ್ಲಿಂದ ಅರ್ಜಿಯನ್ನು ಪಡೆಯಬಹುದಾಗಿದೆ.
ಆಸಕ್ತರು ಎ.30ರೊಳಗೆ ಜಿಲ್ಲಾ ಸನಮನ್ವಯ ಯೋಜನಾಧಿಕಾರಿ, ಸಮಗ್ರ ಗಿರಿಜನ ಯೋಜನೆ, ರಜತಾದ್ರಿ ಮಣಿಪಾಲ ಹಾಗೂ ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕರು ಉಡುಪಿ, ಕುಂದಾಪುರ, ಕಾರ್ಕಳ ಇಲ್ಲಿಂದ ಅರ್ಜಿಯನ್ನು ಪಡೆಯಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಜಿಲ್ಲೆಯ ಐಟಿಡಿಪಿ ಕಚೇರಿಯ ದೂರವಾಣಿ ಸಂಖ್ಯೆ 0820-2574814ಗೆ ಸಂಪರ್ಕಿಸುವಂತೆ ಯೋಜನಾ ಸಮನ್ವಯಾಧಿಕಾರಿ, ಸಮಗ್ರ ಗಿರಿಜನ ಅಭಿವೃದ್ಧಿ ಯೋಜನೆ ಉಡುಪಿ ಇವರ ಪ್ರಕಟಣೆ ತಿಳಿಸಿದೆ.