14 ದಿನ ಭಾರತದೊಂದಿಗಿನ ಗಡಿ ಬಂದ್: ಬಾಂಗ್ಲಾ ದೇಶ ನಿರ್ಧಾರ
Update: 2021-04-26 15:47 GMT
ಢಾಕಾ (ಬಾಂಗ್ಲಾದೇಶ), ಎ. 26: ಭಾರತದಲ್ಲಿ ಕೊರೋನ ವೈರಸ್ ಸೋಂಕು ಪ್ರಕರಣಗಳ ಸಂಖ್ಯೆಯಲ್ಲಿ ಅಗಾಧ ಹೆಚ್ಚಳವಾಗಿರುವ ಹಿನ್ನೆಲೆಯಲ್ಲಿ, ಅದರೊಂದಿಗಿನ ಗಡಿಯನ್ನು 14 ದಿನಗಳ ಕಾಲ ಮುಚ್ಚಲು ಬಾಂಗ್ಲಾದೇಶ ನಿರ್ಧರಿಸಿದೆ.
ಪ್ರಧಾನಿ ಕಚೇರಿಯಿಂದ ಬಂದ ಸೂಚನೆಗಳನ್ವಯ ಭಾರತದಿಂದ ಬರುವವರ ಪ್ರವೇಶವನ್ನು ನಿಷೇಧಿಸಲಾಗಿದೆ ಎಂದು ಬಾಂಗ್ಲಾದೇಶದ ಗೃಹ ಸಚಿವ ಅಸಾದುಝಮಾನ್ ಖಾನ್ ‘ಢಾಕಾ ಟ್ರಿಬ್ಯೂನ್’ ಪತ್ರಿಕೆಗೆ ರವಿವಾರ ತಿಳಿಸಿದ್ದಾರೆ.
ಭಾರತದೊಂದಿಗಿನ ಗಡಿಯನ್ನು ಮುಚ್ಚುವ ಪ್ರಸ್ತಾವವೊಂದನ್ನು ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ತಿರಸ್ಕರಿಸಲಾಗಿತ್ತು.