​ಮರದಿಂದ ಬಿದ್ದು ಕೃಷಿಕ ಮೃತ್ಯು

Update: 2021-04-26 16:09 GMT

ಹೆಬ್ರಿ, ಎ.26: ಮರ ಹತ್ತಿ ಸೊಪ್ಪು ಕಡಿಯುತ್ತಿದ್ದ ಕೃಷಿಕರೊಬ್ಬರು ಅಕಸ್ಮಿಕವಾಗಿ ಕೊಂಬೆ ಮುರಿದು ಕೆಳಗೆ ಬಿದ್ದು ಮೃತಪಟ್ಟ ಘಟನೆ ಎ.24ರಂದು ಬೆಳಗ್ಗೆ ಹೆಬ್ರಿ ಗ್ರಾಮದ ಬಚ್ಚಪ್ಪು ಅಂಗನವಾಡಿ ಕೇಂದ್ರದ ಎದುರುಗಡೆ ನಡೆದಿದೆ.

ಮೃತರನ್ನು ಹೆಬ್ರಿ ಬಚ್ಚಪ್ಪುನಿವಾಸಿ ಪ್ರಭಾಕರ ನಾಯ್ಕ್(57) ಎಂದು ಗುರುತಿ ಸಲಾಗಿದೆ. ಇವರು ಕೃಷಿಗೆ ಬೇಕಾದ ಸೊಪ್ಪುಗಳನ್ನು ತರಲು ಹೋಗಿದ್ದು, ಸುಮಾರು 40 ಅಡಿ ಎತ್ತರದ ಮರದಲ್ಲಿರುವ ಸೊಪ್ಪುಗಳನ್ನು ಕಡಿಯುತ್ತಿರುವಾಗ ಮರದ ಕೊಂಬೆಯು ಅಕಸ್ಮಿಕವಾಗಿ ಮುರಿದು ಬಿತ್ತೆನ್ನಲಾಗಿದೆ. ಇದರಿಂದ ಕೆಳಗೆ ಬಿದ್ದು ಗಂಭೀರವಾಗಿ ಗಾಯಗೊಂಡ ಇವರು, ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮದ್ಯಾಹ್ನ ಮೃತಪಟ್ಟರು.

ಈ ಬಗ್ಗೆ ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News