ಪ್ರತ್ಯೇಕ ಪ್ರಕರಣ: ಮೂವರ ಆತ್ಮಹತ್ಯೆ

Update: 2021-04-26 16:23 GMT

ಮಣಿಪಾಲ, ಎ.26: ಮಾನಸಿಕ ಕಾಯಿಲೆಯಿಂದ ಬಳಲುತ್ತಿದ್ದ ವಿನಯಾ ಭಟ್ ಎಂಬವರು ಜೀವನದಲ್ಲಿ ಜಿಗುಪ್ಸೆಗೊಂಡು ಎ.24ರಂದು ಅಲೆವೂರಿನ ದಿ.ಲಕ್ಷ್ಮಿ ಅಮ್ಮ ಎಂಬವರಿಗೆ ಸೇರಿದ ಹಾಡಿಯಲ್ಲಿನ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಾಪು: ಮಾನಸಿಕ ಸಮಸ್ಯೆಯಿಂದ ಬಳಲುತ್ತಿದ್ದ ಕಟಪಾಡಿ ಮಣಿಪುರದ ಮ್ಯಾಕ್ಸಿಂ ಡಿಸೋಜ(75) ಎಂಬವರು ಎ.26ರಂದು ಬೆಳಗ್ಗೆ ಮನೆಯ ರೂಮಿನ ಮಾಡಿನ ಜಂತಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಾರ್ಕಳ: ವಿಪರೀತ ಮದ್ಯ ಸೇವನೆ ಚಟ ಹಾಗೂ ಅನಾರೋಗ್ಯದಿಂದ ಬಳಲುತ್ತಿದ್ದ ಬೋಳ ಇಚೋಡಿಗುಡ್ಡೆ ನಿವಾಸಿ ಯೀರು ಮೂಲ್ಯ ಎಂಬವರ ಮಗ ವಿಶ್ವನಾಥ ಮೂಲ್ಯ(45) ಎಂಬವರು ಮನನೊಂದು ಎ.25ರಂದು ರಾತ್ರಿ ಮನೆಯ ಊಟದ ಹಾಲಿನ ಛಾವಣಿಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News