ಹೆಮ್ಮೆಯ ಕನ್ನಡಿಗರು ಸಂಘದ ವಾರ್ಷಿಕ ಸಭೆ; ನೂತನ ಪದಾಧಿಕಾರಿಗಳ ಆಯ್ಕೆ

Update: 2021-04-27 05:09 GMT

ಅಬುಧಾಬಿ : ದುಬೈ ಕೇಂದ್ರವಾಗಿ ಕಾರ್ಯಾಚರಿಸುತ್ತಿರುವ ಸಂಯುಕ್ತ ಅರಬ್ ಸಂಸ್ಥಾನದ ರಾಜ್ಯಗಳ ಕನ್ನಡಿಗರ ಒಡನಾಟದ ಸಂಘವಾದ ಹೆಮ್ಮೆಯ ಯುಎಇ ಕನ್ನಡಿಗರು ತಂಡದ 2021ಸಾಲಿನ ಅಧ್ಯಕ್ಷರಾಗಿ ಮಮತಾ ಮೈಸೂರು ಅವರು ಸರ್ವ ಸಮಿತಿ ಸದಸ್ಯರ ಸಹಮತದೊಂದಿಗೆ ನೇಮಕಗೊಂಡರು.

ಮಾಜಿ ಅಧ್ಯಕ್ಷರಾದ ಸುದೀಪ್ ದಾವಣಗೆರೆ ಅವರು ಸಂಘದ ಲೋಗೋ ಇರುವ ಧ್ವಜವನ್ನು ನೂತನ ಅಧ್ಯಕ್ಷರಿಗೆ ಹಸ್ತಾಂತರ ಮಾಡುವ ಮೂಲಕ ಶುಭಾಶಯಗಳನ್ನು ಕೋರಿದರು, ಹಾಗು ಸಂಘದ ಗೌರವಾಧ್ಯಕ್ಷರಾಗಿ ಉದ್ಯಮಿ ಮತ್ತು ಹಲವು ಕನ್ನಡ ಸಂಘಟನೆಗಳ ಪೋಷಕರಾದ ಮೊಹಮ್ಮದ್ ಮುಸ್ತಫಾ ಅವರು ಸಮಿತಿಯ ಸರ್ವ ಸದಸ್ಯರ ಸಹಮತದಿಂದ ಆಯ್ಕೆಯಾದರು.

ಸಂಘದ ಸಂಚಾಲಕರಾದ ರಫೀಕಲಿ ಕೊಡಗು ಅವರು ಮಾತನಾಡಿ ಮಾಜಿ ಅಧ್ಯಕ್ಷರಾದ ಸುದೀಪ್ ದಾವಣಗೆರೆ ಅವರ ಕಾಲದ ಸಮಾಜಮುಖಿ ಕಾರ್ಯವೈಖರಿಗಳನ್ನು ಶ್ಲಾಘಿಸಿದರು. ಸದಸ್ಯರಾದ ವಿಷ್ಣುಮೂರ್ತಿ ಅವರು ಹಾಲಿ ಅಧ್ಯಕ್ಷರಿಗೆ ಹಲವು ರೀತಿಯ ವಿನಂತಿಗಳನ್ನು  ಮುಂದಿನ ವರ್ಷಗಳಲ್ಲಿ ಹೊಸ ಅಧ್ಯಕ್ಷರ ಮುಂದಾಳತ್ವದಲ್ಲಿ ಹೊಸ ಕಾರ್ಯ ಯೋಜನೆ ರೂಪು ರೇಷೆಗಳ ಸಲಹೆ ನೀಡಿದರು.

2021ನೇ ಸಾಲಿನಲ್ಲಿ ಉದ್ಯೋಗ ಮೇಳ ಮತ್ತು ಉದ್ಯೋಗ ಮಾಹಿತಿ ಕಾರ್ಯಾಗಾರ, ಮಕ್ಕಳ ಪ್ರತಿಭಾ ಸ್ಪರ್ಧೆ, ಸರ್ವ ಧರ್ಮ ಇಫ್ತಾರ್ ಕೂಟ, ಯುಎಇ ಕನ್ನಡ ವೈದ್ಯರ ದಿನಾಚರಣೆ, ಯುಎಇ ಕನ್ನಡ ಉದ್ಯಮಿಗಳ ಸಭೆ, ದಸರಾ ಕ್ರೀಡೋತ್ಸವ, ಮತ್ತು ರಕ್ತದಾನ ಶಿಬಿರ ನಡೆಸಲು ತೀರ್ಮಾನಿಸಲಾಯಿತು.

2021ನೇ ಸಾಲಿನ ಮುಖ್ಯ ಕಾರ್ಯದರ್ಶಿಯಾಗಿ ಸೆಂತಿಲ್ ಬೆಂಗಳೂರು, ಮುಖ್ಯ ಸಂಚಾಲಕರಾಗಿ ರಫೀಕಲಿ ಕೊಡಗು ಮತ್ತು ಸುದೀಪ್ ದಾವಣಗೆರೆ, ಹೆಮ್ಮೆಯ ಕನ್ನಡತಿಯರು ಮಹಿಳಾ ಘಟಕದ ಸಂಚಾಲಕಿಯರಾಗಿ ಮಮತಾ ಶಾರ್ಜಾ, ಪಲ್ಲವಿ ದಾವಣಗೆರೆ ಮತ್ತು ಹಾದಿಯ ಮಂಡ್ಯ ಅವರು ನೇಮಕಗೊಂಡರೆ ಹೆಮ್ಮೆಯ ಯುಎಇ ಕನ್ನಡ ವೈದ್ಯರ ತಂಡದ ಮುಖ್ಯಸ್ಥರಾಗಿ ಡಾ.ಸವಿತಾ ಮೈಸೂರು, ದುಬೈ ಕನ್ನಡ ಸಾಹಿತ್ಯ ಬಳಗದ ಸಂಚಾಲಕರಾಗಿ ವಿಷ್ಣುಮೂರ್ತಿ ಮೈಸೂರು, ಯುಎಇ ಕನ್ನಡ ಎಂಟ್ರಪನರ್ಸ್ ಸಂಚಾಲಕರಾಗಿ ಶಂಕರ್ ಬೆಳಗಾವಿ , ಉದ್ಯೋಗ ಗ್ರೂಪಿನ ಸಂಚಾಲಕರಾಗಿ ಅನಿತಾ ಬೆಂಗಳೂರು ಮತ್ತು ಮೊಯಿನುದ್ದೀನ್ ಹುಬ್ಬಳ್ಳಿ ಅವರು ನೇಮಕರಾದರು.

2021ನೇ ಸಾಲಿನ ತಂಡದ ಸಲಹಾ ಸಮಿತಿ ಸದಸ್ಯರಾಗಿ ಡಾ.ಗುರುಮಾದವ್ ರಾವ್, ಮಾನ್ಯ: ರಾಘವೇಂದ್ರ ಮನ್ಬೋಲ್, ಡಾ. ಶಾಂತಿ, ಮೊಹಮ್ಮದ್ ಮೂಳೂರ್, ಡಾ.ಮಮತಾ ರಡ್ದಾರ್, ಡಾ.ಅಬ್ದುಲ್ ಹ್ಯಾರಿಸ್, ಮಾನ್ಯ ಚಂದ್ರಶೇಖರ ಲಿಂಗದಳ್ಳಿ, ಮಾನ್ಯ ಮೊಹಮ್ಮದ್ ನದೀಮ್, ಡಾ..ರಶ್ಮಿ, ಮತ್ತು ಮಾನ್ಯ ನಾಗರಾಜ್ ರಾವ್,  ನೇಮಕರಾದರೆ ತಂಡದ ಉಪ ಸಮಿತಿ ವಿಭಾಗದ ಅಜ್ಮಾನ್ ಭಾಗದ ಸಹ ಸಂಚಾಲಕರಾಗಿ ನಿಜಾರ್ ಕಾಸರಗೋಡು ಕನ್ನಡಿಗ, ರಾಮ್ ಕಾಮತ್ ಬೆಳಗಾವಿ, ಅಬುಧಾಬಿ ಭಾಗದ ಸಹ ಸಂಚಾಲಕರಾಗಿ ಜಾಸ್ಲಿನ್ ಮಂಗಳೂರು, ಇಬ್ರಾಹಿಂ ಮಂಗಳೂರು, ವೀರಪ್ಪ ಮಂಡ್ಯ, ಫುಜೆರಾ ಭಾಗದ ಸಹ ಸಂಚಾಲಕರಾಗಿ ಅಕ್ರಮ್ ಕೊಡಗು, ಲಾರೆನ್ಸ್ ಮಂಗಳೂರು, ರಾಸ್ ಅಲ್ ಖೈಮಾ ಸಹ ಸಂಚಾಲಕರಾಗಿ ಸಯ್ಯದ್ ಇರ್ಷಾದ್ ಶಿವಮೊಗ್ಗ, ರಾಜೇಶ್ ಮಂಗಳೂರು ನೇಮಕಗೊಂಡರು ಹಾಗೆ ಸಹಾಯ ಹಸ್ತ ವಿಭಾಗದ ಸಹ ಸಂಚಾಲಕರಾಗಿ ವರದರಾಜ್ ಕೋಲಾರ, ನವಾಜ್ ಕುಂದಾಪುರ, ಅರ್ಪಿತಾ ಬೆಂಗಳೂರು ನೇಮಕಗೊಂಡರು.

ಜಾಬ್ ಸಹಾಯ ವಿಭಾಗದ ಸಹ ಸಂಚಾಲಕರಾಗಿ ನವೀನ್ ಬೆಂಗಳೂರು, ಸಾಮಾಜಿಕ ಜಾಲತಾಣಗಳ ಸಹ ಸಂಚಾಲಕರಾಗಿ ಅಶ್ರಫ್ ವಿಟ್ಲ, ಸುನಿಲ್ ಬೆಂಗಳೂರು, ಫಿರೋಜ್ ಮಂಗಳೂರು ಉಪ ಸಮಿತಿ ಸದಸ್ಯರಾಗಿ ಅಬ್ದುಲ್ ಹಾದಿ ಕುಂದಾಪುರ, ಅರ್ಜುನ್ ಬೆಂಗಳೂರು, ಪ್ರಜ್ವಲ್ ದಾವಣಗೆರೆ, ರೋಹಿತ್ ದಾವಣಗೆರೆ, ಸಂದೀಪ್ ಹಾಸನ, ಶಿಹಾಬ್ ಸುಳ್ಯ, ವಿಬಿಶೇರ ಉಡುಪಿ ನೇಮಕಗೊಂಡರು.

ಕೋವಿಡ್ ಕಾರಣ ಮುಖ್ಯ ಸಮಿತಿ ಸದಸ್ಯರು ಮಾತ್ರ ಮಮತಾ ಮೈಸೂರು ಅವರ ನಿವಾಸದಲ್ಲಿ ನೇರವಾಗಿ ಭೇಟಿಯಾಗಿ ಚರ್ಚೆ ನಡೆಸಿದರು ಮತ್ತು ಉಪ ಸಮಿತಿ ಮತ್ತು ಸಲಹಾ ಸಮಿತಿ ಸದಸ್ಯರೊಂದಿಗೆ ಝೂಮ್ ಅಂತರ್ಜಾದಲ ಮೂಲಕ ವಾರ್ಷಿಕ ಸಭೆಯನ್ನು ನಡೆಸಿ ಮುಂದಿನ ಒಂದು ವರ್ಷದಲ್ಲಿ ತಂಡವು ಮಾಡಬೇಕಾದ ಕಾರ್ಯಕ್ರಮ ಮತ್ತು ಸಾಮಾಜಿಕ ಕಾರ್ಯಗಳ ಬಗ್ಗೆ ರೂಪುರೇಷೆ ರಚಿಸಿದರು .

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News