ಎಮ್.ಎನ್.ಜಿ ಫೌಂಡೇಶನ್ ವತಿಯಿಂದ ನಮಾಝ್ ವಸ್ತ್ರ, ಕುರ್ ಆನ್ ವಿತರಣೆ

Update: 2021-04-27 06:03 GMT

ಬಂಟ್ವಾಳ: ಎಮ್ ಎನ್ ಜಿ ಫೌಂಡೇಶನ್  ಮಂಗಳೂರು ಇದರ ವತಿಯಿಂದ ಸಂಸ್ಥೆಯ ರಮಝಾನ್ ತಿಂಗಳ ವಿವಿಧ ಯೋಜನೆಗಳಲ್ಲಿ ಒಂದಾದ ಅರ್ಹ ಕುಟುಂಬಗಳಿಗೆ ಮಹಿಳೆಯರ ನಮಾಝ್ ವಸ್ತ್ರ ಮತ್ತು ಕುರ್ ಆನ್ ವಿತರಣಾ ಕಾರ್ಯಕ್ರಮಕ್ಕೆ ಬಂಟ್ವಾಳದಲ್ಲಿ ಚಾಲನೆ ನೀಡಲಾಯಿತು.

ಕಾರ್ಯಕ್ರಮವನ್ನು ಸಂಸ್ಥೆಯ ಪದಾಧಿಕಾರಿ, ಉದ್ಯಮಿ ಎಮ್.ಎಮ್ ಇಬ್ರಾಹಿಂ ನಂದಾವರ ಅವರು ಉದ್ಘಾಟಿಸಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿಕೊಂಡಿದ್ದ ಸಂಸ್ಥೆಯ ಸ್ಥಾಪಕರು, ದಕ್ಷಿಣ ಕನ್ನಡ ಜಿಲ್ಲೆಯ ಹೆಸರಾಂತ ಸಮಾಜಸೇವಕರಾದ ಇಲ್ಯಾಸ್ ಮಂಗಳೂರು ಅವರು ಮಾತನಾಡಿ ಈ ಯೋಜನೆಯ ಭಾಗವಾಗಿ ಜಿಲ್ಲೆಯ ವಿವಿಧ ಭಾಗಗಳಲ್ಲಿ ಆಯ್ದ ಅರ್ಹ ಹಲವಾರು ಬಡ ಕುಟುಂಬಗಳಿಗೆ ಮಹಿಳೆಯರ ನಮಾಝ್ ವಸ್ತ್ರ ಮತ್ತು ಕುರ್ ಆನ್ ತಲುಪಿಸಲಿದ್ದು, ಈ ಹಿಂದೆ ಸಂಸ್ಥೆಯ ವತಿಯಿಂದ ಜಿಲ್ಲೆಯ ವಿವಿಧ ಭಾಗಗಳಲ್ಲಿ ಸಮೀಕ್ಷೆ ನಡೆಸಿ ರಮಝಾನ್ ಕಿಟ್ ವಿತರಿಸುವ ಸಂದರ್ಭದಲ್ಲಿ ಬಹುತೇಕ ಕಡೆ ಮಹಿಳೆಯರ ನಮಾಝ್ ವಸ್ತ್ರ ಮತ್ತು ಕುರ್ ಆನ್ ಅವಶ್ಯಕತೆ ಬಗ್ಗೆ ಅರಿವಿಗೆ ಬಂದಿತ್ತು. ಅದರಂತೆ ಈ ಯೋಜನೆಯನ್ನು ರೂಪಿಸಿದ್ದೇವೆ ಹಾಗೂ ಈ ಸಂಧರ್ಭದಲ್ಲಿ ಸಂಸ್ಥೆಯ ಮುಂದಿನ ಯೋಜನೆಗಳ ಬಗ್ಗೆಯೂ ವಿವರಿಸಿದರು.

ಕೋವಿಡ್ ಶಿಷ್ಟಾಚಾರಗಳ ಪಾಲನೆಯೊಂದಿಗೆ ನಡೆದ ಕಾರ್ಯಕ್ರಮದಲ್ಲಿ ಸಂಸ್ಥೆಯ ಪದಾಧಿಕಾರಿ ಬಶೀರ್ ಪರ್ಲಡ್ಕ ಅವರು ಸ್ವಾಗತಿಸಿದರು ಹಾಗೂ ಫಯಾಝ್ ಮಾಡೂರು ವಂದಿಸಿದರು.

ಕಾರ್ಯಕ್ರಮದಲ್ಲಿ ಸಂಸ್ಥೆಯ ಪದಾಧಿಕಾರಿಗಳಾದ ಇಸಾಕ್ ತುಂಬೆ, ಇಮ್ತಿಯಾಝ್ ಕೆದುಂಬಾಡಿ, ಮನ್ಸೂರ್ ಬಿ.ಸಿ ರೋಡ್, ಶಿಹಾಬ್ ತಂಙಳ್, ರಫೀಕ್ ಪರ್ಲಿಯಾ, ನವಾಝ್ ಕೋಟೆಕಣಿ, ಶಾಕಿರ್ ಪಾವೂರು, ಮುಖ್ತಾರ್ ಅಕ್ಕರಂಗಡಿ ಹಾಗೂ ಮುದಸ್ಸಿರ್ ಕೆ.ಸಿ ರೋಡ್ ಅವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News