ಅಗತ್ಯವಿದ್ದಲ್ಲಿ ಮಸ್ಜಿದ್ ಹಾಲ್, ಮದ್ರಸಗಳನ್ನು ಕೋವಿಡ್ ಕೇಂದ್ರಗಳನ್ನಾಗಿಸಲು ಮುಸ್ಲಿಂ ಜಮಾಅತ್ ಒಕ್ಕೂಟದ ತೀರ್ಮಾನ

Update: 2021-04-27 15:25 GMT

ಪುತ್ತೂರು: ಪುತ್ತೂರು ತಾಲೂಕಿನ ಜಮಾಅತ್ ಹಾಗೂ ವಿವಿಧ ಮುಸ್ಲಿಂ ಸಂಘ-ಸಂಸ್ಥೆಗಳ ಮುಖ್ಯಸ್ಥರ ಸಭೆಯು ಪುತ್ತೂರು ತಾಲೂಕು ಸೀರತ್ ಕಮಿಟಿಯ ಕಚೇರಿಯಲ್ಲಿ ಮಂಗಳವಾರ ನಡೆಯಿತು. ಸಭೆಯಲ್ಲಿ ಆಯ್ದ ಮಸ್ಜಿದ್ ಹಾಲ್ ಮತ್ತು ಮದರಸಗಳನ್ನು ಅಗತ್ಯವಿದ್ದಲ್ಲಿ ಕೋವಿಡ್ 19 ಚಿಕಿತ್ಸಾ ಕೇಂದ್ರಗಳನ್ನಾಗಿ ಮಾರ್ಪಡಿಸುವ ನಿಟ್ಟಿನಲ್ಲಿ ದಕ್ಷಿಣ ಕನ್ನಡ ಜಿಲ್ಲಾಡಳಿತದೊಂದಿಗೆ ಸಂಪೂರ್ಣ ಸಹಕಾರ ನೀಡುವುದೆಂದು ತೀರ್ಮಾನಿಸಲಾಯಿತು.

ಕೋವಿಡ್ ಲಸಿಕೆಯನ್ನು 18 ವರ್ಷ ಮೇಲ್ಪಟ್ಟ ಎಲ್ಲರೂ ಕಡ್ಡಾಯವಾಗಿ ಪಡಕೊಳ್ಳುವಂತೆಯೂ ಹಾಗೂ ಕೋವಿಡ್ ಕರ್ಫ್ಯೂ ಕಾಲದಲ್ಲಿ ಸರಕಾರದ ಮಾರ್ಗಸೂಚಿಯನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆಯೂ ಕರೆ ನೀಡಲಾಯಿತು.

ಸಭೆಯಲ್ಲಿ ಪುತ್ತೂರು ಕೇಂದ್ರ ಜುಮ್ಮಾ ಮಸ್ಜಿದ್  ಅಧ್ಯಕ್ಷ ಎಲ್ ಟಿ ಅಬ್ದುಲ್ ರಝಾಕ್ ಹಾಜಿ, ಪುತ್ತೂರು ತಾಲೂಕು ಸೀರತ್ ಕಮಿಟಿ  ಅಧ್ಯಕ್ಷ ಅಬ್ದುಲ್ ಖಾದರ್ ಹಾಜಿ ಸುರಯ್ಯ,ಕರ್ನಾಟಕ ಮುಸ್ಲಿಂ ಜಮಾತ್ ಪುತ್ತೂರು ತಾಲೂಕು ಅಧ್ಯಕ್ಷ ಅಬ್ದುಲ್ ರಹಿಮಾನ್ ಹಾಜಿ ಅರಿಯಡ್ಕ, ಕೂರ್ನಡ್ಕ ಜುಮ್ಮಾ ಮಸ್ಜಿದ್ ಪುತ್ತೂರು ಅಧ್ಯಕ್ಷ ಕೆ.ಎಚ್ ಖಾಸಿಂ ಹಾಜಿ ,ಕಲ್ಲೇಗ ಜುಮ್ಮಾ ಮಸ್ಜಿದ್ ಗೌರವಾಧ್ಯಕ್ಷ ಶಕೂರ್ ಹಾಜಿ ಕಲ್ಲೇಗ, ಸೈಯದ್ ಮಲೆ ಜುಮ್ಮಾ ಮಸ್ಜಿದ್ ಸಾಲ್ಮರ ಪುತ್ತೂರು ಅಧ್ಯಕ್ಷ ನ್ಯಾಯವಾದಿ ನೂರುದ್ದೀನ್ ಸಾಲ್ಮರ, ಕರ್ನಾಟಕ ರಾಜ್ಯ ದಾರಿಮೀಸ್ ಎಸೋಸಿಯೇಶನ್ ಕೋಶಾಧಿಕಾರಿ ಕೆ. ಆರ್. ಹುಸೈನ್ ದಾರಿಮಿ ರೆಂಜಲಾಡಿ, ಈ- ಫೌಂಡೇಶನ್ ಇಂಡಿಯ ಅಧ್ಯಕ್ಷ ಡಾ. ಇಸ್ಮಾಯಿಲ್ ಸರ್ಫ್ರಾಝ್,  ದ.ಕ. ಮುಸ್ಲಿಂ ಯುವಜನ ಪರಿಷತ್ ಅಧ್ಯಕ್ಷ ಅಶ್ರಫ್ ಕಲ್ಲೇಗ, ಪ್ರಧಾನ ಕಾರ್ಯದರ್ಶಿ ಸಾಲ್ಮರ ಮಹಮ್ಮದ್ ಶರೀಫ್, ಇಹ್ಸಾನ್ ಫೌಂಡೇಶನ್ ಪುತ್ತೂರು ಇದರ ನಿಕಟಪೂರ್ವ ಅಧ್ಯಕ್ಷರಾದ ಪಿ.ಬಿ ಅಬ್ದುಲ್ಲಾ ಹಾಜಿ, ಝಕರಿಯ ಜುಮಾ ಮಸ್ಜಿದ್ ಬೆಳ್ಳಾರೆ ಆಡಳಿತಾಧಿಕಾರಿ  ಯಾಕೂಬ್ ಖಾನ್, ಪಿಎಫ್ಐ ಜಿಲ್ಲಾ ಸಮಿತಿ ಸದಸ್ಯ ಅಶ್ರಫ್ ಬಾವ, ಬಿ ಹ್ಯೂಮನ್ ಪುತ್ತೂರು ಅಧ್ಯಕ್ಷ ಇಂತಿಯಾಝ್ ಪಾರ್ಲೆ, ಜಮೀಯತುಲ್ ಫಲಾಹ್ ಪುತ್ತೂರು ಅಧ್ಯಕ್ಷ ಶೇಕ್ ಝೈನುದ್ದೀನ್ ಈ ಸಂದರ್ಭ ಉಪಸ್ಥಿತರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News