ಬ್ರಹ್ಮಾವರ: ಕೋವಿಡ್ ಮೃತದೇಹಗಳ ಅಂತ್ಯ ಸಂಸ್ಕಾರ; ಸೌಹಾರ್ದತೆ ಮೆರೆದ ಯುವಕರ ತಂಡ

Update: 2021-05-06 16:03 GMT

ಬ್ರಹ್ಮಾವರ, ಮೇ 6: ಬ್ರಹ್ಮಾವರದ ಖಾಸಗಿ ಆಸ್ಪತ್ರೆಯಲ್ಲಿ ಇಂದು ಕೋವಿಡ್ ನಿಂದ ಮರಣ ಹೊಂದಿದ ಮಾಬುಕಳ ಮತ್ತು ಸಾಲಿಗ್ರಾಮದ ಇಬ್ಬರು ವ್ಯಕ್ತಿಗಳ ಅಂತ್ಯಕ್ರಿಯೆಯನ್ನು ಕೆಎಂಜೆ, ಎಸ್‌ಎಸ್‌ಎಫ್, ಎಸ್‌ವೈಎಸ್ ಸಹಾಯ್ ಬ್ರಹ್ಮಾವರ ತಂಡವು ನಡೆಸುವ ಮೂಲಕ ಸೌಹಾರ್ದತೆಯನ್ನು ಮೆರೆದಿದೆ.

ಮೃತ ನರಸಿಂಹ ಕುಂದರ್ ಮತ್ತು ಗಿರಿಜಮ್ಮ ಅವರ ಅಂತ್ಯ ಸಂಸ್ಕಾರವನ್ನು ಈ ತಂಡವು ಬ್ರಹ್ಮಾವರದ ಹಿಂದೂ ರುಧ್ರಭೂಮಿಯಲ್ಲಿ ಗೌರವಯುತವಾಗಿ ನಡೆಸಿದೆ.

ಈ ಮಾನವೀಯ ಸೇವೆಯಲ್ಲಿ ಸುಭಾನ್ ಹೊನ್ನಾಳ, ಮುಸ್ತಾಕ್ ಹೊನ್ನಾಳ, ಇಮ್ತಿಯಾಝ್ ಹೊನ್ನಾಳ, ಇಬ್ರಾಹಿಂ ರಂಗನಕೆರೆ, ಸಿದ್ದೀಕ್ ಅಂಬಾಗಿಲು, ಸಂಶುದ್ದೀನ್ ರಂಗನಕೆರೆ ಹಾಗೂ ಗಾಂಧಿ ನಗರದ ನಯಾಝ್ ಕೈಜೋಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News