ಮಂಗಳೂರು: ಪೊಲೀಸರ ಊಟದ ವ್ಯವಸ್ಥೆಗೆ ದಿನಸಿ ಸಾಮಗ್ರಿ ಹಸ್ತಾಂತರ

Update: 2021-05-06 17:05 GMT

ಮಂಗಳೂರು, ಮೇ 6: ಮಂಗಳೂರು ನಗರ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ನೇತೃತ್ವದಲ್ಲಿ ಕಮಿಷನರೇಟ್ ಕಚೇರಿ ಬಳಿ ಆರಂಭಿಸಲಾದ ಪೊಲೀಸ್ ಸಿಬ್ಬಂದಿಯ ಊಟೋಪಚಾರ ವ್ಯವಸ್ಥೆಗೆ ವ್ಯಾಪಾರಿ ಮುತ್ತಲಿಬ್ ಬೆಳ್ಮ ದಿನಸಿ ಸಾಮಗ್ರಿ ಪೂರೈಸಿದ್ದಾರೆ.

ಪೊಲೀಸರ ಊಟದ ವ್ಯವಸ್ಥೆಗೆ ಸ್ವ ಪ್ರೇರಣೆಯಿಂದ ದಿನಸಿ ಸಾಮಗ್ರಿ ಒದಗಿಸಿದ ಪ್ರಸ್ತುತ ಪಾಂಡೇಶ್ವರ ಸಮೀಪದ ಸುಭಾಷ್ ನಗರ ನಿವಾಸಿಯಾಗಿರುವ ಮುತ್ತಲಿಬ್ ಬೆಳ್ಮ ಅವರನ್ನು ಕಮಿಷನರ್ ಅಭಿನಂದಿಸಿದರು. ಈ ಸಂದರ್ಭ ಡಿಸಿಪಿಗಳಾದ ಹರಿರಾಂ ಶಂಕರ್, ವಿನಯ್ ಗಾಂವ್ಕರ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News