ಸರಕಾರ ತಪ್ಪು ನಿರ್ಧಾರದಿಂದ ಜನರಿಗೆ ತೊಂದರೆ: ಶಂಕರ್ ಕುಂದರ್

Update: 2021-05-08 16:28 GMT

ಕುಂದಾಪುರ, ಮೇ 8: ಯಡಿಯೂರಪ್ಪಸರಕಾರ ದಿನಕ್ಕೊಂದು ನಿರ್ಧಾರ ತೆಗೆದುಕೊಳ್ಳುತ್ತಿದೆ. ಆಡಳಿತ ಸರಾಕರ ತೆಗೆದುಕೊಳ್ಳುವ ನಿರ್ಧಾರ ಜನಸಾಮಾನ್ಯರಿಗೆ ಹೊರೆಯಾಗಬಾರದು. ಆದರೆ ಸರಕಾರ ತೆಗೆದುಕೊಂಡಿರುವ ನಿರ್ಧಾರದಿಂದ ಕೂಲಿ ಕಾರ್ಮಿಕರಿಗೆ ತೊಂದರೆಯಾಗುತ್ತಿದೆ ಎಂದು ಕೋಟ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಂಕರ್ ಕುಂದರ್ ಟೀಕಿಸಿದ್ದಾರೆ.

ದಿನಸಿ, ತರಕಾರಿ, ಹಾಲುಗಳೆಲ್ಲ ದಿನವಿಡೀ ಇದ್ದರೂ ಅದನ್ನು ತರಲು ನಡೆದುಕೊಂಡೇ ಹೋಗಬೇಕು ಎಂದು ಸರಕಾರ ಆದೇಶ ಹೊರಡಿಸಿದೆ. ಈ ಆದೇಶದಿಂದ ಗ್ರಾಮೀಣ ಪ್ರದೇಶದ ಜನರಿಗೆ ತುಂಬಾ ಕಷ್ಟಕರವಾಗಿದೆ. ಒಂದು ವೇಳೆ ಹೋದರೆ ಅವರನ್ನು ಪೊಲೀಸರು, ಅಧಿಕಾರಿಗಳು ಹಿಡಿದರೆ, ಹಲ್ಲೆ ಯಾದರೆ ಯಾರು ಕಾಪಾಡಬೇಕು? ಸರಕಾರದ ಈ ನಿರ್ಧಾರದಿಂದ ಜನ ಸಾಮಾನ್ಯರಿಗೆ ತೊಂದರೆಯಾಗಲಿದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News