ರೈತ ಸಂಪರ್ಕ ಕೇಂದ್ರಗಳ ಕಾರ್ಯನಿರ್ವಹಣೆ ಅವಧಿ ಪರಿಷ್ಕರಣೆ
ಉಡುಪಿ, ಮೇ 10: ಜಿಲ್ಲೆಯ ಎಲ್ಲಾ ಹೋಬಳಿ ಮಟ್ಟದ ರೈತ ಸಂಪರ್ಕ ಕೇಂದ್ರಗಳು ಲಾಕ್ಡೌನ್ ಅವಧಿಯಲ್ಲಿ ಅಂದರೆ ಮೇ 10ರಿಂದ ಮೇ 24ರ ವರೆಗೆ ಪ್ರತಿನಿತ್ಯ (ರಜೆ ದಿನ ಹೊರತುಪಡಿಸಿ) ಬೆಳಗ್ಗೆ 6 ರಿಂದ ಬೆಳಗ್ಗೆ 10 ಗಂಟೆಯವರೆಗೆ ತೆರೆದಿರುತ್ತವೆ. ಬದಲಾದ ಕಚೇರಿ ಅವಧಿಯು ಕೋವಿಡ್-19 ಲಾಕ್ಡೌ್ ಜಾರಿಯಲ್ಲಿರುವವರೆಗೆ ಇರುತ್ತದೆ.
ರೈತರು ಬದಲಾದ ಸಮಯವನ್ನು ಗಮನಿಸಿ ಮುಂಗಾರು ಹಂಗಾಮಿಗೆ ಅವಶ್ಯವಿರುವ ಬಿತ್ತನೆ ಬೀಜ ಹಾಗೂ ಕೃಷಿ ಪರಿಕರಗಳನ್ನು ರೈತ ಸಂಪರ್ಕ ಕೇಂದ್ರದಿಂದ ಪಡೆಯಬಹುದು. ರೈತ ಸಂಪರ್ಕ ಕೇಂದ್ರಕ್ಕೆ ಈ ಸಮಯದಲ್ಲಿ ರೈತರು ಭೇಟಿ ನೀಡಿ ಕೋವಿಡ್-19ರ ನಿಯಂತ್ರಣಕ್ಕಾಗಿ ಸರಕಾರ ಹೊರಡಿ ಸಿರುವ ಎಲ್ಲಾ ಮಾರ್ಗಸೂಚಿಗಳನ್ನು ಅನುಸರಿಸಿ ಅಗತ್ಯ ಕೃಷಿ ಪರಿಕಗಳನ್ನು ಪಡೆದುಕೊಳ್ಳಬಹುದು.
ಲಾಕ್ಡೌನ್ ಅವಧಿಯಲ್ಲಿ ಕೃಷಿ ಸಂಬಂಧಿತ ಸಮಸ್ಯೆಗಳ ಮಾಹಿತಿಗಾಗಿ ರೈತ ಸಂಪರ್ಕ ಕೇಂದ್ರಗಳ ಕೃಷಿ ಅಧಿಕಾರಿಗಳನ್ನು (ಕೋಟ-ಮೊ.ನಂ:8277929753, ಬ್ರಹ್ಮಾವರ-ಮೊ.ನಂ.8277932506, ಉಡುಪಿ-ಮೊ.ನಂ:8277929751, ಕಾಪು-ಮೊ.ನಂ: 8277929752, ಕುಂದಾಪುರ-ಮೊ.ನಂ: 8277929754, ವಂಡ್ಸೆ- ಮೊ.ನಂ: 8277929755, ಬೈಂದೂರು-ಮೊ.ನಂ: 8277932520, ಕಾರ್ಕಳ-ಮೊ.ನಂ: 8277932523, ಅಜೆಕಾರು-ಮೊ.ನಂ: 8277932527) ಅಥವಾ ಕೃಷಿ ಇಲಾಖೆಯ ತಾಲೂಕು ಸಹಾಯಕ ಕೃಷಿ ನಿರ್ದೇಶಕ (ಉಡುಪಿ- ಮೊ.ನಂ:8277932515, ಕುಂದಾಪುರ-ಮೊ.ನಂ:8277929754, ಕಾರ್ಕಳ- ಮೊ.ನಂ:8277932505) ಇವರನ್ನು ಸಂಪರ್ಕಿಸುವಂತೆ ಜಿಲ್ಲಾ ಕೃಷಿ ಇಲಾಖೆ ಜಂಟಿ ಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.