×
Ad

ಸರಕಾರದ ಕಾನೂನು ಪಾಲನೆ ಮೂಲಕ ಈದ್ ಆಚರಿಸಿ: ಉಡುಪಿ ಜಿಲ್ಲಾ ಸಂಯುಕ್ತ ಜಅಮಾತ್ ಸಂದೇಶ

Update: 2021-05-11 16:53 IST

ಉಡುಪಿ, ಮೇ 11: ಕೊರೋನದ ಎರಡನೇ ಅಲೆಯ ಅಟ್ಟಹಾಸವು ದಿನ ದಿಂದ ದಿನಕ್ಕೆ ಹೆಚ್ಚುತ್ತಿದೆ. ಸರಕಾರದ ಮಾರ್ಗಸೂಚಿಗಳು ಪದೇ ಪದೇ ಬದಲಾವಣೆ ಆಗುತ್ತಿದೆ. ಈ ಭೀತಿಯ ಹಿನ್ನೆಲೆಯಲ್ಲಿ ಎಲ್ಲರೂ ಈದುಲ್ ಫಿತ್ರ್ ಹಬ್ಬವನ್ನು ಅತ್ಯಂತ ಸರಳವಾಗಿ ಆಚರಿಸಬೇಕು. ಈ ಮಧ್ಯೆ ನೆರೆ ಮನೆಯವರ ಬಗ್ಗೆ ಗಮನ ಇರಿಸಬೇಕು. ಸಾಧ್ಯವಾದ್ದಷ್ಟು ಅರ್ಹರಿಗೆ ಸಹಾಯ ಸಹಕಾರಗಳನ್ನು ನೀಡಬೇಕು ಎಂದು ಉಡುಪಿ ಜಿಲ್ಲಾ ಸಂಯುಕ್ತ ಜಅಮಾತ್ ತನ್ನ ಈದ್ ಸಂದೇಶದಲ್ಲಿ ತಿಳಿಸಿದೆ.

ಲೋಕವೇ ದುಃಖದಲ್ಲಿರುವಾಗ ಹಬ್ಬವನ್ನು ಅದ್ದೂರಿಯಿಂದ ಆಚರಿಸುವುದು ಸರಿಯಲ್ಲ. ಈದ್ ನಮಾಝ್ ನಿರ್ವಹಿಸಿ, ಬಡವರಿಗೆ ಸಹಾಯ ಸಹಕಾರವನ್ನು ನೀಡಬೇಕು. ಸರಕಾರದ ಕಾನೂನುಗಳನ್ನು ಪಾಲಿಸಬೇಕು. ಈ ಕಠಿಣ ಸಂದರ್ಭ ದಲ್ಲಿ ಬಂದಿರುವ ಈದುಲ್ ಫಿತ್ರ್ ಹಬ್ಬವನ್ನು ಆದಷ್ಟು ಸರಳವಾಗಿ, ಕುಟುಂಬ ಸದಸ್ಯರ ಜೊತೆಗೆ ಆಚರಿಸಬೇಕು.

ದುಂದು ವೆಚ್ಚವಿಲ್ಲದೆ, ಅನಗತ್ಯಗಳಲ್ಲಿ ತೊಡಗದೆ, ಪ್ರಯಾಣ ಇತ್ಯಾದಿಗಳಿಗೆ ಹೋಗದೆ, ಆರೋಗ್ಯ ಇಲಾಖೆಯ ಆದೇಶವನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಧಾರ್ಮಿಕ ಕೇಂದ್ರಗಳು ತೆರೆದು ಮೊದಲಿನಂತೆ ಸುಗಮವಾಗಿ ನಡೆಯಲು ಕೋವಿಡ್-19ನಿಂದ ಮುಕ್ತಿ ಹೊಂದಲು ಪ್ರಾರ್ಥಿಸ ಬೇಕು. ಯಾವುದೇ ಹೆಜ್ಜೆ ಗಳನ್ನು ಇಡುವಾಗ ಜಾಗ್ರತೆ ವಹಿಸಬೇಕು. ನಮ್ಮ ಮಕ್ಕಳ ಬಗ್ಗೆ ಎಲ್ಲಾ ರೀತಿಯಲ್ಲೂ ಗಮನಿಸಬೇಕು ಎಂದು ಉಡುಪಿ ಜಿಲ್ಲಾ ಸುನ್ನೀ ಸಂಯುಕ್ತ ಜಮಾಅತ್ ವಿನಂತಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News