ಗುರುವಾರ ಈದುಲ್ ಫಿತ್ರ್ : ದ.ಕ. ಜಿಲ್ಲಾ ಖಾಝಿ ಘೋಷಣೆ
Update: 2021-05-11 14:09 GMT
ಮಂಗಳೂರು, ಮೇ 11: ಮಂಗಳವಾರ ಅಸ್ತಮಿಸಿದ ಬುಧವಾರ ರಾತ್ರಿ ಶವ್ವಾಲ್ನ ಪ್ರಥಮ ಚಂದ್ರದರ್ಶನ ಎಲ್ಲೂ ಆಗದ ಕಾರಣ ಬುಧವಾರ ಅಸ್ತಮಿಸಿದ ಗುರುವಾರ ರಾತ್ರಿ ಶವ್ವಾಲ್ 1 ಆಗಲಿರುವುದರಿಂದ ಪಶ್ಚಿಮ ಕರಾವಳಿ ತೀರದಲ್ಲಿ ಗುರುವಾರ ಈದುಲ್ ಫಿತ್ರ್ ಆಚರಿಸಲು ಖಾಝಿಗಳಾದ ಅಲ್ಹಾಜ್ ತ್ವಾಕ ಅಹ್ಮದ್ ಮುಸ್ಲಿಯಾರ್ ಮತ್ತು ಉಡುಪಿ ಸಂಯುಕ್ತ ಖಾಝಿ ಝೈನುಲ್ ಉಲಮಾ ಅಲ್ಹಾಜ್ ಅಬ್ದುಲ್ ಹಮೀದ್ ಮುಸ್ಲಿಯಾರ್ (ಮಾಣಿ ಉಸ್ತಾದ್) ಕರೆ ನೀಡಿದ್ದಾರೆ ಎಂದು ಪ್ರತ್ಯೇಕ ಪ್ರಕಟನೆ ತಿಳಿಸಿದೆ.