ಕಾರ್ಕಳ: ವಿಶ್ವ ದಾದಿಯರ ದಿನದಂಗವಾಗಿ ದಾದಿಯರಿಗೆ ಗೌರವಾರ್ಪಣೆ

Update: 2021-05-12 12:14 GMT

ಕಾರ್ಕಳ: ವಿಶ್ವ ದಾದಿಯರ ದಿನಾಚರಣೆಯಂಗವಾಗಿ ಕಾರ್ಕಳ ಸರಕಾರಿ ಆಸ್ಪತ್ರೆಯ ಯೋಗಕ್ಷೇಮ ಹೆಲ್ಪ್ ಡೆಸ್ಕ್ ವತಿಯಿಂದ ತಾಲೂಕು ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಶುಶ್ರೂಷಕಿಯರಿಗೆ ಗುಲಾಬಿ ನೀಡಿ ಶುಭ ಹಾರೈಸಲಾಯಿತು.

ನ್ಯಾಯವಾದಿ ರವೀಂದ್ರ ಮೊಯ್ಲಿ ಮಾತನಾಡಿ, ಮಹಾಮಾರಿ ಕೋವಿಡ್‌ ಸಂದರ್ಭ ದಾದಿಯರ ಸೇವೆ ಬೆಲೆಕಟ್ಟಲಾಗದ್ದು. ಕುಟುಂಬ ವರ್ಗವನ್ನು ದೂರವಿರಿಸಿ, ಕೊರೋನ ಬಾಧಿತರ ಸೇವೆಗೈಯುತ್ತಿರುವುದು ಅಭಿನಂದನೀಯ ಹಾಗೂ ಸ್ಮರಣೀಯವೆಂದರು.

ಡಾ. ಕೆ.ಎಸ್. ರಾವ್‌, ಹಿರಿಯ ಶುಶ್ರೂಷಕಿ ಪದ್ಮಾವತಿ, ಮಹಾವೀರ ಹೆಗ್ಡೆ, ಅನಂತಕೃಷ್ಣ ಶೆಣೈ, ಅಶೋಕ್ ಸುವರ್ಣ, ನವೀನ್ ನಾಯಕ್, ನಿರಂಜನ್ ಜೈನ್, ಆನಂದ ನಾಯಕ್, ಪಲ್ಲವಿ ಪ್ರವೀಣ್, ಪ್ರಕಾಶ್ ರಾವ್, ಬಾಲಕೃಷ್ಣ ನಾಯಕ್ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News