ಸುಳ್ಯ: ಪಯಸ್ವಿನಿ ನದಿಯಲ್ಲಿ ಮುಳುಗಿ ಯುವಕ ಮೃತ್ಯು

Update: 2021-05-12 13:04 GMT

ಸುಳ್ಯ: ಅರಂಬೂರಿನಲ್ಲಿ ಪಯಸ್ವಿನಿ ನದಿಗೆ ಸ್ನಾನಕ್ಕೆ ಹೋದ ಬಿಹಾರ ಮೂಲದ ಯುವಕರಲ್ಲಿ ಓರ್ವ ನೀರಲ್ಲಿ ಮುಳುಗಿ ಮೃತಪಟ್ಟ ಘಟನೆ ನಡೆದಿದ್ದು, ಮೃತದೇಹವನ್ನು ಪೈಚಾರಿನ ಮುಳುಗು ತಜ್ಞರ ತಂಡ ಹೊರಕ್ಕೆ ತೆಗೆದ ಘಟನೆ ಮಂಗಳವಾರ ವರದಿಯಾಗಿದೆ.

ಅರಂಬೂರಿನ ಪ್ರೀತಂ ಹೊಲ್ಲೋ ಬ್ಲಾಕ್ಸ್ ಸಂಸ್ಥೆಯಲ್ಲಿ ಕೆಲಸ ಮಾಡುವ ಬಿಹಾರ ಮೂಲದ ಯುವಕರು ನಿನ್ನೆ ಮಧ್ಯಾಹ್ನ ಸ್ನಾನಕ್ಕೆಂದು ಪಾಲಡ್ಕ ಸಮೀಪ ಪಯಸ್ವಿನಿ ನದಿಗೆ ಹೋಗಿದ್ದರು. ಸ್ನಾನಕ್ಕೆ ಹೋದವರಲ್ಲಿ ಕುಂದನ್ ಎಂಬ ಯುವಕ ನಾಪತ್ತೆಯಾಗಿದ್ದ ಎನ್ನಲಾಗಿದೆ. ಈತ ಬಾರದಿರುವ ವಿಚಾರ ಸಂಜೆಯ ವೇಳೆಗೆ ಯುವಕರಿಗೆ ಗೊತ್ತಾಗಿದ್ದು, ಸಂಜೆಯ ಬಳಿಕ ಹುಡುಕಾಡಿದರೂ ಆತನ ಪತ್ತೆಯಾಗಲಿಲ್ಲ. ಬುಧವಾರ ಬೆಳಿಗ್ಗೆ ಪೈಚಾರಿನ ಆರ್.ಬಿ.ಬಶೀರ್ ನೇತೃತ್ವದ ಮುಳುಗು ತಜ್ಞರ ತಂಡ ಕುಂದನ್ ಮೃತದೇಹವನ್ನು ಪತ್ತೆಹಚ್ಚಿ ಹೊರತೆಗೆದರು.

ಈ ಕಾರ್ಯಾಚರಣೆಯಲ್ಲಿ ಆರ್.ಬಿ.ಬಶೀರ್ ಜೊತೆಗೆ ಶರೀಫ್ ಟಿ.ಎ., ಅಬ್ಬಾಸ್ ಶಾಂತಿನಗರ, ಲತೀಫ್ ಬೊಳುಬೈಲು, ರಿಫಾಯಿ ಸೋಣಂಗೇರಿ, ಬಶೀರ್ ಕೆ.ಪಿ. ಮೊದಲಾದವರು ಭಾಗವಹಿಸಿದ್ದರು. ರಂಝಾನ್ ಉಪವಾಸದಲ್ಲಿ ತೊಡಗಿದ್ದರೂ ಈ ಯುವಕರು ಈ ಕಾರ್ಯ ನೆರವೇರಿಸಿರುವುದು ವ್ಯಾಪಕ ಶ್ಲಾಘನೆಗೆ ಕಾರಣವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News